NEW
Font size
Worksheetslesson-6 ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ
Total questions: 30
Worksheet time: 15mins
1) 1857ರ ದಂಗೆಯನ್ನು ಭಾರತೀಯ ಇತಿಹಾಸಕಾರರು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆದರೆ ಇಂಗ್ಲೀಷ್ ಇತಿಹಾಸಕಾರರು ಇದನ್ನು ಎಂದು ಕರೆದಿದ್ದಾರೆ ?
A) ಅಸಹಕಾರ ಚಳುವಳಿ
B) ಸಿಪಾಯಿ ದಂಗೆ
C) ಬಂಡಾಯ
D) ಭಾರತೀಯರ ಸೇನಾ ದಂಗೆ
2) ದಂಗೆಯ ತಕ್ಷಣದ ಕಾರಣದಲ್ಲಿ ಸೈನಿಕರಿಗೆ ನೀಡುತ್ತಿದ್ದ ಬಂದೂಕುಗಳ ಹೆಸರೇನು ?
A) ಏ ಕೆ 47
B) ಫೈಯರ್ ಗನ್
C) ರಾಯಲ್ ಎನ್ ಫೀಲ್ಡ್
D) ರಾಯಲ್ 47
3) ದಂಗೆಯ ಸಮಯದಲ್ಲಿ ಭಾರತದ ಚಕ್ರವರ್ತಿ ಎಂದು ಕರೆಯಲ್ಪಟ್ಟ ಮೊಗಲ್ ದೊರೆ ಯಾರು ?
A) ಒಂದನೇ ಬಹದ್ದೂರ್ ಷಾ
B) ಎರಡನೇ ಬಹದ್ದೂರ್ ಷಾ
C) ಔರಂಗಜೇಬ
D) ಷಾ ಅಲಂ
4) 1857ರ ದಂಗೆಯ ಸಮಯದಲ್ಲಿ ಬ್ರಿಟಿಷ್ ಅಧಿಕಾರಿಯನ್ನು ಕೊಂದವರು ಯಾರು ?
A) ಭಗತ್ ಸಿಂಗ್
B) ಚಂದ್ರಶೇಖರ್ ಆಜಾದ್
C) ಮಂಗಲ ಪಾಂಡೆ
D) ಸುಭಾಷ್ ಚಂದ್ರ ಬೋಸ್
5) 'ದತ್ತು ಮಕ್ಕಳಿಗೆ ಹಕ್ಕಿಲ್ಲ' ಎಂಬ ನೀತಿಯನ್ನು ಮೂಲಕ ವಶಪಡಿಸಿಕೊಂಡ ಮೊದಲ ಸಂಸ್ಥಾನ ಯಾವುದು ?
A) ಝಾನ್ಸಿ
B) ಕಿತ್ತೂರು
C) ಹೈದರಾಬಾದ್
D) ಸತಾರ
6) 1857ರ ದಂಗೆಯಲ್ಲಿ ಭಾರತೀಯ ಸೈನಿಕರನ್ನು ಧಾರ್ಮಿಕವಾಗಿ ಪ್ರಚೋದಿಸಿದ ಘಟನೆ ಯಾವುದು ?
A) ಸಾಗರೋತ್ತರ ಸೇವೆ
B) ಬಂಗಾಳ ವಿಭಜನೆ
C) ಪಾಕಿಸ್ತಾನ ವಿಭಜನೆ
D) ವೇತನ ನೀಡದಿರುವುದು
7) ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಬೀಜಾಂಕುರಕ್ಕೆ ನಾಂದಿಯಾದ ಘಟನೆ ಯಾವುದು ?
A) ದೆಹಲಿ ದಂಗೆ
B) ಝಾನ್ಸಿ ದಂಗೆ
C) ಕಿತ್ತೂರಿನ ದಂಗೆ
D) ಮೀರತ್ ದಂಗೆ
8) ನಾನಾ ಸಾಹೇಬನ ಸೇನಾದಿಪತಿ ಯಾರು ?
A) ಮಂಗಲ ಪಾಂಡೆ
B) ತಾತ್ಯಾಟೋಪಿ
C) ಸಂಗೊಳ್ಳಿ ರಾಯಣ್ಣ
D) ವೆಂಕಟಪ್ಪ ನಾಯಕ
9) 1857ರ ದಂಗೆಯಲ್ಲಿ ಹೆಮ್ಮೆಯ ಸ್ಥಾನ ಪಡೆದವರು ಯಾರು ?
A) ಕಿತ್ತೂರಿನ ಚೆನ್ನಮ್ಮ
B) ಝಾನ್ಸಿ ರಾಣಿ ಲಕ್ಷ್ಮೀಬಾಯಿ
C) ತಾತ್ಯಾಟೋಪಿ
D) ಮಂಗಲ ಪಾಂಡೆ
10) 1857ರಲ್ಲಿ ಝಾನ್ಸಿ ರಾಣಿ ಬ್ರಿಟಿಷರ ವಿರುದ್ಧ ಹೋರಾಡಿ ವಶಪಡಿಸಿಕೊಂಡ ಪ್ರದೇಶ ಯಾವುದು ?
A) ಮೀರತ
B) ದೆಹಲಿ
C) ಗ್ವಾಲಿಯರ್
D) ಖಾನಾಪುರ
11) ಭಾರತದ ಕರಕುಶಲ ಮತ್ತು ದೇಶಿಯ ಕೈಗಾರಿಕೆಗಳು ಕ್ಷಿಣಿಸಲು ಇಂಗ್ಲೆಂಡಿನಲ್ಲಿ ಆದ ಕೈಗಾರಿಕಾ ಬೆಳವಣಿಗೆ ?
A) ಕೈಗಾರಿಕಾ ಕ್ರಾಂತಿ
B) ನಗರೀಕರಣ
C) ಜಾಗತೀಕರಣ
D) ವ್ಯಾಪಾರಿಕರಣ
12) 1857ರ ದಂಗೆಯಲ್ಲಿ ಬಂದೂಕುಗಳಿಗೆ ಉಪಯೋಗಿಸುತ್ತಿದ್ದ ತುಪಾಕಿಗಳಿಗೆ ಯಾವ ಪ್ರಾಣಿಯ ಕೊಬ್ಬು ಸವರಲಾಗಿತ್ತು ?
A) ಹಂದಿ ಮತ್ತು ಕುರಿ
B) ಹಂದಿ ಮತ್ತು ಕೋಳಿ
C) ಹಂದಿ ಮತ್ತು ಹಸು
D) ಆಡು ಮತ್ತು ಹಸು
13) ಬ್ರಿಟಿಷರು ಇನಾಂ ಭೂಮಿಯನ್ನು ಕಸಿದುಕೊಳ್ಳಲು ರಚಿಸಿದ ಆಯೋಗ ಯಾವುದು ?
A) ಇನಾಂ ಭೂಮಿ
B) ಭೂಕಂದಾಯದ ಭೂಮಿ
C) ದತ್ತು ಭೂಮಿ
D) ಜಮೀನ್ದಾರರ ಭೂಮಿ
14) ಶಾಸನ ರಚಿಸುವ ಪ್ರಕ್ರಿಯೆಯಲ್ಲಿ ಭಾರತೀಯರ ಅಭಿಪ್ರಾಯಗಳನ್ನು ತಿಳಿಯಲು ಬ್ರಿಟಿಷರು ಅನುಸರಿಸಿದ ಮಾರ್ಗೋಪಾಯ ಯಾವುದು ?
A) ಭಾರತೀಯ ರಿಗೆ ಅವಕಾಶ
B) ಭಾರತೀಯರನ್ನು ಕಡೆಗಣಿಸುವುದು
C) ಭಾರತೀಯರಿಗೆ ಅವಕಾಶ ನೀಡದೇ ಇರುವುದು
D) ಭಾರತೀಯರ ಬಗ್ಗೆ ಕೀಳು ಭಾವನೆ
15) 1857ರ ದಂಗೆ ಎಲ್ಲಿ ಸಿಪಾಯಿಗಳಿಗೆ ಜನರ ಬೆಂಬಲ ಸಿಗದಿರಲು ಕಾರಣ ?
A) ಸಿಪಾಯಿಗಳ ಲೂಟಿ ದರೋಡೆ
B) ಸಿಪಾಯಿಗಳ ಬಗೆಗಿನ ತಾತ್ಸಾರ ಭಾವನೆ
C) ಸಿಪಾಯಿ ಗಳಲ್ಲಿ ಒಗ್ಗಟ್ಟು ಇಲ್ಲದೆ ಇರುವುದು
D) ಸಿಪಾಯಿಗಳು ಹಣ ಕೇಳಬಹುದು ಎಂದುಕೊಂಡಿದ್ದು
16) ಶಾಸನ ರೂಪಿಸುವ ಪ್ರಕ್ರಿಯೆಯಲ್ಲಿ ಭಾರತೀಯರನ್ನು ಒಳಗೊಳ್ಳುವ ನೀತಿಯು ಜಾರಿಯಾದ ಯಾವಾಗ ?
A) ಸ್ವಾತಂತ್ರ್ಯದ ನಂತರ
B) ಜಲಿಯನ್ ವಾಲಾಬಾಗ್ ದುರಂತದ ನಂತರ
C) ಸೈಮನ್ ಆಯೋಗದ ನಂತರ
D) ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ
17) ರಾಯಲ್ ಎನ್ ಫೀಲ್ಡ್ ಬಂದೂಕುಗಳಿಗೆ ಯಾವ ಪ್ರಾಣಿಯ ಕೊಬ್ಬು ಸವರಲಾಗಿತ್ತು ?
A) ಹಂದಿ ಮತ್ತು ಹಸು
B) ಹಂದಿ ಮತ್ತು ಕುರಿ
C) ಹಂದಿ ಮತ್ತು ಕೋಳಿ
D) ಕೋಳಿ ಮತ್ತು ಹಸು
18) 1857ರ ದಂಗೆಯ ನಂತರ ಬ್ರಿಟಿಷ್ ಅಧಿಕಾರಿಯನ್ನು ಕೊಂದಿದ್ದರಿಂದ ಯಾರನ್ನು ಗಲ್ಲಿಗೇರಿಸಲಾಯಿತು?
A) ತಾತ್ಯಾಟೋಪಿ
B) ನಾನಾ ಸಾಹೇಬ
C) ಸಂಗೊಳ್ಳಿ ರಾಯಣ್ಣ D
D) ಮಂಗಲಪಾಂಡೆ
19) ಬ್ರಿಟಿಷರು ಜಾರಿಗೆ ತಂದ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯಿಂದ 1857ರ ದಂಗೆ ಸಂಭವಿಸ ಕಾರಣವಾಯಿತು ಇದರಿಂದ ಉಂಟಾದ ಪರಿಣಾಮ ?
A) ಲಕ್ಷಾಂತರ ಸೈನಿಕರು ನಿರುದ್ಯೋಗಿಗಳಾದರು
B) ಸೈನಿಕರಿಗೆ ಬ್ರಿಟಿಷ್ ಸರಕಾರದಲ್ಲಿ ಕೆಲಸ ದೊರೆಯಿತು
C) ಯುದ್ಧ ನಿಂತಿದ್ದು
D) ಸೈನಿಕರ ಸಮರ್ಥ್ಯ ಗೊತ್ತಾಯ್ತು
20) ಬ್ರಿಟಿಷರು ಯಾವ ಆಯೋಗವನ್ನು ನೇಮಿಸಿದರಿಂದ ಕೃಷಿಕರ ಭೂಮಿಯನ್ನು ವಾಪಸ್ ಪಡೆದು ರೈತರು ಆರ್ಥಿಕ ಸಂಕಷ್ಟ ಅನುಭವಿಸುವಂತಾಯಿತು ?
A) ಭೂಹಿಡುವಳಿ ಪದ್ಧತಿ
B) ರೈತವಾರಿ ಪದ್ಧತಿ
C) ಇನಾಂ ಆಯೋಗ
D)ಜಮೀನ್ದಾರಿ ಪದ್ಧತಿ
21) ಬ್ರಿಟಿಷರು ಜಾರಿಗೆ ತಂದ ಕಾನೂನು ಪಕ್ಷಪಾತದಿಂದ ಕೂಡಿದ್ದು ಯಾರಿಗೆ ಪ್ರತ್ಯೇಕ ನಿಯಮಗಳು ಅನ್ವಯವಾಗುತ್ತಿದ್ದವು?
A) ಭಾರತೀಯರಿಗೆ
B) ಪೋರ್ಚುಗೀಸರಿಗೆ
C) ಫ್ರೆಂಚರಿಗೆ
D) ಡಚ್ಚರಿಗೆ
22) ಯಾರಿಗೆ ಇದ್ದ ಸ್ಥಾನಮಾನ ವೇತನ ಬಡ್ತಿ ಅವಕಾಶಗಳು ಭಾರತೀಯ ಸೈನಿಕರಿಗೆ ಇರಲಿಲ್ಲ?
A) ಫ್ರೆಂಚರು
B) ಆಂಗ್ಲರು
C) ಪೋರ್ಚುಗೀಸರು
D) ಡಚ್ಚರು
23) ಬ್ರಿಟಿಷರು ಒದಗಿಸಿದ ರಾಯಲ್ ಎನ್ ಫೀಲ್ಡ್ ಬಂದೂಕುಗಳಿಗೆ ಉಪಯೋಗಿಸುತ್ತಿದ್ದ ತೂಪಾಕಿಗಳಿಗೆ ಹಂದಿ ಮತ್ತು ಹಸುವಿನ ಕೊಬ್ಬನ್ನು ಸವರಿ ದ್ದಾರೆಂಬ ವದಂತಿ ಯಾವ ದಂಗೆಗೆ ತಕ್ಷಣದ ಕಾರಣವಾಯಿತು ?
A) ಸ್ವಾತಂತ್ರ್ಯಹೋರಾಟ
B) ಪ್ರಥಮ ಜಾಗತಿಕ ಯುದ್ಧ
C) ದ್ವಿತೀಯ ಜಾಗತಿಕ ಯುದ್ಧ
D) 1857ರ ದಂಗೆ
24) 1857ರ ದಂಗೆಯಲ್ಲಿ ಬ್ರಿಟಿಷ್ ಅಧಿಕಾರಿಯನ್ನು ಕೊಂದ ಭಾರತೀಯ ಸಿಪಾಯಿ ಯಾರು ?
A) ಮಂಗಲ ಪಾಂಡೆ
B) ಸಂಗೊಳ್ಳಿ ರಾಯಣ್ಣ
C) ತಾತ್ಯಾಟೋಪಿ
D) ನಾನಾ ಸಾಹೇಬ
25) ಮೀರತ್ ನಲ್ಲಿ ಸೈನಿಕರು ಸೆರೆಮನೆಗೆ ನುಗ್ಗಿ ಈಗಾಗಲೇ ಬಂಧಿತರಾಗಿದ್ದ ಭಾರತೀಯ ಸಿಪಾಯಿಗಳನ್ನು ಬಿಡುಗಡೆಗೊಳಿಸಿದ್ದು ಯಾವ ಸಂಗ್ರಾಮಕ್ಕೆ ನಾಂದಿಯಾಯಿತು ?
A) ಜಲಿಯನ್ ವಾಲಾಬಾಗ್ ದುರಂತ
B) ಮೊದಲನೇ ವಿಶ್ವಯುದ್ಧ
C) ಎರಡನೇ ವಿಶ್ವ ಯುದ್ಧ
D) ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ
26) 1857ರ ದಂಗೆಯ ಸಂದರ್ಭದಲ್ಲಿ ಕಾನಪುರದ ನಾಯಕತ್ವ ವಹಿಸಿದವರು ಯಾರು ?
A) ತಾತ್ಯಾಟೋಪಿ
B) ನಾನಾ ಸಾಹೇಬ
C) ಝಾನ್ಸಿ ರಾಣಿ ಲಕ್ಷ್ಮೀಬಾಯಿ
D) ಮಂಗಲ ಪಾಂಡೆ
27) 1857ರ ದಂಗೆಯಲ್ಲಿ ನಾನಾ ಸಾಹೇಬನಿಗೆ ಸಹಾಯಕನಾದವನು ಯಾರು ?
A) ಸಂಗೊಳ್ಳಿ ರಾಯಣ್ಣ
B) ತಾತ್ಯಾಟೋಪಿ
C) ಮಂಗಲ ಪಾಂಡೆ
D) ವೆಂಕಟಪ್ಪ ನಾಯಕ
28) 1857ರ ದಂಗೆ ಯಲ್ಲಿ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ವಿರೋದಿಸಿ ಸಿಡಿದೆದ್ದ ರಾಣಿ ಯಾರು ?
A) ಕಿತ್ತೂರಿನ ಚೆನ್ನಮ್ಮ
B) ಝಾನ್ಸಿರಾಣಿ ಲಕ್ಷ್ಮಿ ಬಾಯಿ
C) ಒನಕೆ ಓಬವ್ವ
D) ರಜಿಯಾಬೇಗಂ
29) ಬ್ರಿಟನ್ ನನ್ನ ರಾಣಿ ಘೋಷಣೆ ಹೊರಡಿಸಿದ್ದು ಯಾವಾಗ ?
A) 1857
B) 1858
C) 1947
D) 1905
30) ಇಂಗ್ಲಿಷರು ಸಹಾಯಕ ಸೈನ್ಯ ಪದ್ಧತಿ ಮತ್ತು ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ಜಾರಿಗೆ ತಂದಿದ್ದರ ಉದ್ದೇಶವೇನು ?
A) ಭಾರತೀಯರಿಗೆ ಹಿಂಸೆ ಮಾಡುವುದು
B) ವ್ಯಾಪಾರದ ವಿಸ್ತರಣೆ
C) ಕಂದಾಯ ವಸೂಲಿ ಮಾಡುವುದು
D) ಅಧಿಕಾರ ವಿಸ್ತರಣೆ
