wayground logo

Free Printable Worksheets

NEW

Font size

S
M
L
XL
Worksheets

10 TH GEOGRAPHY

Total questions: 30

Worksheet time: 15mins

Name
Class
Date
1.

ಬೆಂಗಳೂರನ್ನು ಸಿಲಿಕಾನ್ ವ್ಯಾಲಿ ಎಂದು  ಕರೆಯಲು ಕಾರಣ;

a)

ಎ) ಹೆಚ್ಚು ಸರೋವರಗಳು ಕಂಡುಬರುತ್ತವೆ. 

b)

ಬಿ) ಸಾಫ್ಟ್ ವೇರ್ ಕೈಗಾರಿಕೆಯಲ್ಲಿ ಮುಂದುವರೆದಿದೆ.

     

c)

 ಸಿ) ಹೆಚ್ಚು ಉದ್ಯಾನವನಗಳನ್ನು ಹೊಂದಿದೆ. 

d)

ಡಿ) ಸಿಲಿಕಾನ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ

2.

      ಡೂನ್ಸ್ ಗಳೆಂದರೆ_______ 

a)

ಎ) ಹಿಮಾಲಯದ ಎತ್ತರದ ಪರ್ತಗಳು   

b)

ಬಿ) ಹಿಮಾಲಯದ ಗಿರಿಧಾಮಗಳು

  

c)

ಸಿ) ನದಿಗಳ ಸಂಚಯನದ ಭಾಗ  

d)

 ಡಿ) ಸಿವಾಲಿಕ್ ಬೆಟ್ಟಗಳ ಸಮತಟ್ಟಾದ ತಳವುಳ್ಳ ಕಣಿವೆಗಳು  

3.

ಭಾರತದ ಅತ್ಯಂತ ಎತ್ತರವಾದ ಶಿಖರ________

a)

ಎ) ಹಿಮಾಲಯ  

b)

ಬಿ) ಗೌರಿಶಂಕರ

c)

ಸಿ) ಮೌಂಟ್ ಎವರೆಸ್ಟ್   

d)

ಡಿ) ಗಾಡ್ವಿನ್ ಆಸ್ಟಿನ್ (K2)

4.

ಭಾರತದಲ್ಲಿ ಅತೀ ಹೆಚ್ಚು ಉಷ್ಣಾಂಶ ದಾಖಲಾಗಿರುವ ಪ್ರದೇಶ;

a)

ಎ) ದೆಹಲಿ  

b)

ಬಿ) ಮಧ್ಯಪ್ರದೇಶದ ಭೂಪಾಲ್  

c)

ಸಿ) ತಮಿಳುನಾಡಿನ ಚೆನ್ನೈ

d)

ಡಿ) ರಾಜಸ್ಥಾನದ ಗಂಗಾನಗರ

5.

ಭಾರತದಲ್ಲಿ ಅತೀ ಕಡಿಮೆ ಮಳೆ ಬೀಳುವ ಪ್ರದೇಶ;

a)

ಎ) ರೂಯ್ಲಿ     

b)

 ಬಿ) ಡ್ರಾಸ್   

c)

 ಸಿ) ಗಂಗಾನಗರ 

d)

  ಡಿ) ಮಾಸಿನ್ ರಾಮ್

6.

ನಾಗಾರ್ಜುನ ಸಾಗರ ಆಣೆಕಟ್ಟೆಯನ್ನುಈ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ

a)

ಎ) ರಿಹಾಂದ್ ನದಿ   

b)

ಬಿ) ಕಾವೇರಿ ನದಿ

c)

ಸಿ) ಸಟ್ಲೇಜ್ ನದಿ   

d)

ಡಿ) ಕೃಷ್ಣಾ ನದಿ

7.

ಎಪ್ರಿಲ್-ಮೇ ತಿಂಗಳಲ್ಲಿ ಬೀಳುವ ಮಳೆಯನ್ನು ಕರ್ನಾಟಕದಲ್ಲಿ ಹೀಗೆಂದು ಕರೆಯುತ್ತಾರೆ;

a)

ಎ) ಆಂಧಿಸ್  

b)

ಬಿ) ಕಾಲಬೈಸಾಕಿ 

c)

ಸಿ) ಕಾಫಿ ಹೂಮಳೆ  

d)

ಡಿ) ಮಾವಿನ ಹುಯ್ಲು

8.

ಬೇಸಿಗೆಯಲ್ಲಾಗುವ ಪರಿಸರಣ ಮಳೆಯನ್ನು  ‘ಆಂಧಿಸ್’ ಎಂದು ಕರೆಯಲ್ಪಡುವ ರಾಜ್ಯ;

a)

 ಎ) ಕೇರಳ   

b)

 ಬಿ) ಉತ್ತರಪ್ರದೇಶ   

c)

 ಸಿ) ತಮಿಳುನಾಡು   

d)

ಡಿ) ಪಶ್ಚಿಮಬಂಗಾಳ

9.

ಮೆಕ್ಕಲು ಮಣ್ಣು ಹೀಗೆ ಉತ್ಪತ್ತಿಯಾಗುತ್ತದೆ

a)

ಎ) ಜೈವಿಕ ವಸ್ತುಗಳ ಕೊಳೆಯುವಿಕೆಯಿಂದ   

b)

ಬಿ) ಜಲ ವಿಲೀನೀಕರಣದಿಂದ

     

c)

ಸಿ) ಬಸಾಲ್ಟ್ ಶಿಲೆಗಳ ಶಿಥಿಲೀಕರಣದಿಂದ

d)

ಡಿ) ನದಿಗಳ ಸಂಚಯನದಿಂದ

10.

ಈ ಕೆಳಗಿನವುಗಳಲ್ಲಿ ಯಾವುದು ಮಣ್ಣಿನ ಸವೆತಕ್ಕೆ ಕಾರಣವಲ್ಲ;

a)

ಎ) ಅವೈಜ್ಞಾನಿಕ ಬೇಸಾಯ    

b)

ಬಿ) ಸಮೋನ್ನತಿ ಬೇಸಾಯ  

c)

ಸಿ) ಪ್ರಾಣಿಗಳ ಅತಿಯಾದ ಮೇಯಿಸುವಿಕೆ 

d)

ಡಿ) ಅರಣ್ಯನಾಶ

11.

ಮಣ್ಣಿನ ಸಂರಕ್ಷಣೆ ಎಂದರೆ;

a)

ಎ) ರಾಸಾಯನಿಕ ಗೊಬ್ಬರಗಳನ್ನು ಹೆಚ್ಚಾಗಿ ಬಳಸುವದು  

b)

 ಬಿ)ಮಣ್ಣಿನ ಸವೆತ ನಿಯಂತ್ರಣ & ಫಲವತ್ತತೆ ಕಾಪಾಡುವದು

c)

ಸಿ) ವಿವಿಧ ಬೆಳೆಗಳನ್ನು ಬೆಳೆಯುವದು    

d)

ಡಿ) ಮೇಲ್ಪದರದ ಮಣ್ಣನ್ನು ಇಟ್ಟಿಗೆ & ಹೆಂಚುಗಳ ತಯಾರಿಕೆಗೆ ಬಳಸುವದು.

12.

ಭಾರತದ ವಾಯುಗುಣವು ಈ ಮಾದರಿಯದ್ದಾಗಿದೆ;

a)

ಎ) ಶೀತ ಮಾದರಿ ವಾಯುಗುಣ  

b)

ಬಿ) ಸಮಶೀತೋಷ್ಣ ಮಾದರಿ ವಾಯುಗುಣ

  

c)

ಸಿ) ಅರೆ ಉಷ್ಣಮಾದರಿ ವಾಯುಗುಣ    

d)

ಡಿ) ಉಷ್ಣ ವಲಯದ ಮಾನ್ಸೂನ್ ಮಾದರಿ ವಾಯುಗುಣ  

13.

ನೈಋತ್ಯ ಮಾನ್ಸೂನ್ ಮಾರುತಗಳ ಕಾಲದ(ಮಳೆಗಾಲ) ಅವಧಿ;

a)

ಎ) ಮಾರ್ಚ್–ಮೇ         

b)

ಬಿ) ಜೂನ್–ಸೆಪ್ಟೆಂಬರ್    

c)

ಸಿ) ಡಿಸೆಂಬರ್–ಫೆಬ್ರವರಿ 

d)

ಡಿ) ಸೆಪ್ಟೆಂಬರ್ ಮಧ್ಯ-ನವ್ಹೆಂಬರ್

14.

ಪಶ್ಚಿಮ ಘಟ್ಟಗಳ ಪಶ್ಚಿಮ ಭಾಗವು ಅಧಿಕ ಮಳೆ ಪಡೆಯುತ್ತದೆ ಏಕೆಂದರೆ;

a)

ಎ) ಸಮುದ್ರಕ್ಕೆ ಹತ್ತಿರವಾಗಿದೆ   

b)

ಬಿ) ಪಶ್ಚಿಮ ಘಟ್ಟಗಳು ಸಮತಟ್ಟಾಗಿಲ್ಲ

    

c)

ಸಿ) ಎತ್ತರವಾಗಿದ್ದು ಮಾನ್ಸೂನ್ ಮಾರುತಗಳನ್ನುತಡೆಯುತ್ತವೆ.   

d)

ಡಿ) ಪಶ್ಚಿಮ ಘಟ್ಟಗಳು ನಿರಂತರವಾಗಿವೆ

15.

ಪೂರ್ವ ಮತ್ತು ಪಶ್ಚಿಮ ಘಟ್ಟಗಳು ----ಬೆಟ್ಟಗಳಲ್ಲಿ ಸಂಧಿಸುತ್ತವೆ;

a)

ಎ) ರಾಜಮಹಲ್ ಬೆಟ್ಟಗಳಲ್ಲಿ  

b)

ಬಿ) ನೀಲಗಿರಿ ಬೆಟ್ಟಗಳಲ್ಲಿ   

c)

ಸಿ) ಅರಾವಳಿ ಬೆಟ್ಟಗಳಲ್ಲಿ    

d)

ಡಿ) ವಿಂಧ್ಯ ಶ್ರೇಣಿಗಳಲ್ಲಿ

16.

ಭಾರತದಲ್ಲಿಯೇ ಅತೀ ಉದ್ದವಾದ ಅಣೇಕಟ್ಟು;

a)

ಎ) ನಾಗಾರ್ಜುನ ಸಾಗರ-ಕೃಷ್ಣಾನದಿ      

b)

 ಬಿ) ಹಿರಾಕುಡ್-ಮಹಾನದಿ

        

c)

ಸಿ) ತಿಲೈಯಾ-ದಾಮೋದರ ನದಿ       

d)

ಡಿ) ಭಾಕ್ರಾ-ಸಟ್ಲೇಜ್ ನದಿ

17.

ಭಾರತ ಮತ್ತು ನೇಪಾಳ ದೇಶಗಳ ಜಂಟಿ ನದಿಕಣಿವೆ ಯೋಜನೆ;

a)

ಎ) ಕೋಸಿ ಯೋಜನೆ         

b)

ಬಿ) ರಿಹಾಂದ್ ಯೋಜನೆ   

c)

ಸಿ) ನಾಗಾರ್ಜುನಸಾಗರ ಯೋಜನೆ    

d)

ಡಿ) ಚಂಬಲ್ ಯೋಜನೆ

18.

ಈ ಕೆಳಗಿನವುಗಳಲ್ಲಿ ಯಾವುದು ಅರಣ್ಯ ಆಧಾರಿತ  ಕೈಗಾರಿಕೆಯಾಗಿದೆ;

a)

ಎ) ಹತ್ತಿಬಟ್ಟೆ ಕೈಗಾರಿಕೆ    

b)

ಬಿ) ಕಾಗದ ಕೈಗಾರಿಕೆ   

c)

ಸಿ) ಅಲ್ಯೂಮಿನಿಯಂ ಕೈಗಾರಿಕೆ  

d)

ಡಿ) ಕಬ್ಬಿಣ ಮತ್ತು ಉಕ್ಕು ಕೈಗಾರಿಕೆ

19.

ಈ ಕೆಳಗಿನವುಗಳಲ್ಲಿ ಸರಿಯಾದ ಹೊಂದಾಣಿಕೆಯನ್ನು ಗುರ್ತಿಸಿ;

a)

ಎ) ಕಾಫಿ ಹೂಮಳೆ- ಆಸ್ಸಾಂ   

b)

ಬಿ) ಆಂಧಿಸ್- ಪಶ್ಚಿಮಬಂಗಾಳ

        

c)

ಸಿ) ಕಾಲ ಬೈಸಾಕಿ-ಉತ್ತರಪ್ರದೇಶ 

d)

ಡಿ) ಮಾವಿನ ಹುಯ್ಲು-ಕೇರಳ

20.

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರು;

a)

ಎ) ಲಾಲ್ ಬಹಾದ್ದೂರ್ ಶಾಸ್ತ್ರಿ ವಿಮಾನ ನಿಲ್ದಾಣ     

b)

 ಬಿ) ಇಂದಿರಾಗಾಂಧಿ ವಿಮಾನ ನಿಲ್ದಾಣ 

      

c)

ಸಿ) ಛತ್ರಪತಿ ಶಿವಾಜಿ  ವಿಮಾನ ನಿಲ್ದಾಣ 

        

d)

ಡಿ) ಕೆಂಪೇಗೌಡ ವಿಮಾನ ನಿಲ್ದಾಣ 

        

21.

ಮುಂಬಯಿ ಬಂದರನ್ನು ಹೀಗೆ ಕರೆಯುತ್ತಾರೆ;

a)

ಎ) ಅರಬ್ಬೀ ಸಮುದ್ರದ ರಾಣಿ  

b)

ಬಿ) ಭಾರತದ ಹೆಬ್ಬಾಗಿಲು 

c)

ಸಿ) ನವ್ಹಾಶೇವಾ ಬಂದರು  

d)

 ಡಿ) ಕರ್ನಾಟಕದ ಹೆಬ್ಬಾಗಿಲು

22.

ಭಾರತದಲ್ಲಿ ಅತೀ ಹೆಚ್ಚು ಗೋಧಿ ಬೆಳೆಯುವ ರಾಜ್ಯ;

a)

ಎ) ಪಂಜಾಬ್      

b)

ಬಿ) ಕರ್ನಾಟಕ      

c)

ಸಿ) ಉತ್ತರಪ್ರದೇಶ   

d)

ಡಿ) ಹರಿಯಾಣ

23.

ಕೃಷ್ಣಾ ನದಿಗೆ ನಿರ್ಮಿಸಲಾದ ಆಲಮಟ್ಟಿ ಅಣೇಕಟ್ಟನ್ನು ಈ ಹೆಸರಿನಿಂದ ಕರೆಯುತ್ತಾರೆ;

a)

ಎ) ಜವಾಹರಲಾಲ ನೆಹರು ಜಲಾಶಯ      

b)

ಬಿ) ಮೊರಾರ್ಜಿ ದೇಸಾಯಿ ಜಲಾಶಯ

         

c)

ಸಿ) ಅಟಲ್ ಬಿಹಾರಿ ವಾಜಪೇಯಿ ಜಲಾಶಯ    

d)

ಡಿ) ಲಾಲ ಬಹಾದ್ದೂರ್ ಶಾಸ್ತ್ರಿ ಜಲಾಶಯ

24.

ಸಮುದ್ರ ತೀರದ ಸವೆತಕ್ಕೆ ಕಾರಣವಾಗಿರುವ ಮಾನವನ ಕೃತ್ಯ;

a)

ಎ) ರಸ್ತೆ ನಿರ್ಮಾಣ ಮಾಡುವದು.     

b)

 ಬಿ) ಹೆಚ್ಚಾಗಿ ಮೀನುಗಾರಿಕೆಮಾಡುವದು.

       

c)

ಸಿ) ಮ್ಯಾಂಗ್ರೋವ್ ಅರಣ್ಯಗಳನ್ನು ಬೆಳೆಸುವದು. 

d)

ಡಿ) ಮಿತಿ ಮೀರಿದ ಮರಳು & ಕಲ್ಲು ಗಣಿಗಾರಿಕೆ

25.

ಭಾರತದಲ್ಲಿ ಅತೀ ಎತ್ತರವಾದ ಅಣೇಕಟ್ಟು ಭಾಕ್ರಾ-ನಂಗಲ್; ಈ ಜಲಾಶಯಕ್ಕಿರುವ ಹೆಸರು;

a)

ಎ) ಗೋವಿಂದ ಸಾಗರ  

b)

ಬಿ) ನಾಗಾರ್ಜುನ ಸಾಗರ    

c)

ಸಿ) ಪಂಪ ಸಾಗರ   

d)

ಡಿ) ಗೋವಿಂದ ವಲ್ಲಭಪಂತ ಸಾಗರ

26.

ಪಶ್ಚಿಮ ಘಟ್ಟಗಳ ಪೂರ್ವ ಭಾಗವು ಪಶ್ಚಿಮ ಭಾಗದಷ್ಟು ಮಳೆ ಪಡೆಯುವದಿಲ್ಲ,ಏಕೆಂದರೆ;

a)

ಎ) ಅದು ದಕ್ಷಿಣ ಭಾಗದಲ್ಲಿದೆ.    

b)

ಬಿ) ಮಳೆ ನೆರಳಿನ ಪ್ರದೇಶವಾಗಿದೆ.

            

c)

ಸಿ) ಹೆಚ್ಚು ಹಿಮಪಾತವಾಗುತ್ತದೆ. 

d)

ಡಿ) ಅಲ್ಲಿ ಹೆಚ್ಚು ದಟ್ಟ ಅರಣ್ಯವಿದೆ.

27.

ಭಾರತದ ಅತೀ ಪ್ರಮುಖವಾದ ನೀರಾವರಿ ವಿಧಾನ;

a)

ಎ) ಬಾವಿ ನೀರಾವರಿ   

b)

ಬಿ) ಕಾಲುವೆ ನೀರಾವರಿ   

c)

ಸಿ) ಕೆರೆ ನೀರಾವರಿ   

d)

ಡಿ) ಹನಿ ನೀರಾವರಿ

28.

“ಬಿಳಿಲುಗಳು” ಈ ಕಾಡುಗಳ ಲಕ್ಷಣಗಳಾಗಿವೆ;

a)

ಎ) ನಿತ್ಯಹರಿದ್ವರ್ಣ ಕಾಡುಗಳು    

b)

ಬಿ) ಎಲೆ ಉದುರಿಸುವ ಮಾನ್ಸೂನ್ ಕಾಡುಗಳು

       

c)

ಸಿ) ಮ್ಯಾಂಗ್ರೋವ್ ಕಾಡುಗಳು   

d)

ಡಿ)  ಪರ್ವತ ಕಾಡುಗಳು   

29.

ಪೂರ್ವಘಟ್ಟಗಳಲ್ಲಿನ ಅತ್ಯಂತ ಎತ್ತರವಾದ ಶಿಖರ;

a)

ಎ) ಅರ್ಮಕೊಂಡ     

b)

ಬಿ) ಅಣೈಮುಡಿ   

c)

ಸಿ) ಗಾಡ್ವಿನ್ ಆಸ್ಟಿನ್ 

d)

ಡಿ) ಮೌಂಟ್ ಎವರೆಸ್ಟ್

30.

ಉಷ್ಣವಲಯದ ಆವರ್ತ ಮಾರುತಗಳ ಪ್ರಭಾವಕ್ಕೊಳಪಡದ ರಾಜ್ಯ;

a)

ಎ) ತಮಿಳುನಾಡು     

b)

 ಬಿ) ಕೇರಳ      

c)

ಸಿ) ಆಂಧ್ರಪ್ರದೇಶ     

d)

ಡಿ) ಓಡಿಸ್ಸಾ