wayground logo

Free Printable Worksheets

NEW

Font size

S
M
L
XL
Worksheets

ಗದ್ಯಪಾಠ.1 ಯುದ್ಧ

Total questions: 25

Worksheet time: 13mins

Name
Class
Date
1.

ಯುದ್ಧ ಪಾಠದ ಆಕರ ಕೃತಿ

a)

ತಳ ಒಡೆದ ದೋಣಿಯಲ್ಲಿ

b)

ಖೆಡ್ಡಾ

c)

ಚಪ್ಪಲಿಗಳು

d)

ಸುಳಿಯಲ್ಲಿ ಸಿಕ್ಕವರು

2.

ರಾಹಿಲನು ಒಬ್ಬ

a)

ವೈದ್ಯ

b)

ಸೈನಿಕ

c)

ಪೈಲಟ್

d)

ವೈದ್ಯ ಸೈನಿಕ

3.

ರಾಹಿಲನು ತಲುಪಿದ ತೀರ ಯಾರಿಗೆ ಸೇರಿದ್ದು

a)

ಮುದುಕಿಗೆ

b)

ತನ್ನ ದೇಶದವರಿಗೆ

c)

ಶತ್ರು ದೇಶದವರಿಗೆ

d)

ಪೋಲೀಸರಿಗೆ

4.

ಗಡಿ ಪ್ರದೇಶಗಳಲ್ಲಿ ವಿಮಾನ ದಾಳಿಯಿಂದ ತಪ್ಪಿಸಿಕೊಳ್ಳಲು ಬಳಸುವ ನಿಯಮ

a)

ಬ್ಲಾಕ್ ಔಟ್

b)

ಲಾಕ್ ಡೌನ್

c)

ಸೀಲ್ ಡೌನ್

d)

ಜನತಾ ಕರ್ಪ್ಯೂ

5.

ರಾಹಿಲನು ತಿಳಿಸುವ ಪ್ರಕಾರ ತಾನು ಈ ಕಡೆಯವನು

a)

ಭಾರತದವನು

b)

ಪಾಕಿಸ್ತಾನದವನು

c)

ಸಂಕಷ್ಟಕ್ಕೀಡಾದ ಮನುಷ್ಯರ ಕಡೆಯವನು

d)

ಯುದ್ಧ ಮಾಡುವವರ ಕಡೆಯವನು

6.

ಜೀವಿಯೊಂದನ್ನು ಜೀವಸಹಿತ ಹೊರಹಾಕಲು ಆ ಹೆಣ್ಣುಮಗಳು ಇದನ್ನು ಪಣಕ್ಕಿಟ್ಟಿದ್ದಾಳೆ.

a)

ಮಗುವನ್ನು

b)

ತನ್ನ ಜೀವವನ್ನು

c)

ದೇಶವನ್ನು

d)

ಹಣವನ್ನು

7.

ಮುದುಕಿಯು ರಾಹಿಲನನ್ನು ತನ್ನ ಬಳಿ ಯಾರು ಕಳುಹಿಸಿರುವಂತೆ ತೋರುತ್ತದೆ ಎಂದು ಹೇಳುತ್ತಾಳೆ?

a)

ಏಸು

b)

ಶಿವ

c)

ವಿಷ್ಣು

d)

ಅಲ್ಲಾಹು

8.

ರಾಹಿಲನ ದೇಹದಲ್ಲಿ ........... ಸಂಚಾರವಾದಂತಾಯಿತು.

a)

ರೋಷದ ರಕ್ತ

b)

ಹೊಸ ರಕ್ತ

c)

ಹಳೆ ರಕ್ತ

d)

ಸಂತೋಷದ ರಕ್ತ

9.

ಮುದುಕಿಯು ಬಾಗಿಲು ತೆರೆದಾಗ ಕೈಯಲ್ಲಿದ್ದುದು.

a)

ಸೋಲಾರ್ ದೀಪ

b)

ಲೇಸರ್ ದೀಪ

c)

ಚಿಕ್ಕ ದೀಪ

d)

ಟೇಬಲ್ ಲ್ಯಾಂಪ್

10.

ಮುದುಕಿ ಹೇಳುವ ಪ್ರಕಾರ ಯುದ್ಧವು ಎಲ್ಲರ ದೇಹಕ್ಕೂ ಮನಸ್ಸಿಗೂ ಉಂಟುಮಾಡುವುದು

a)

ಆನಂದ

b)

ಕಷ್ಟ

c)

ತೊಂದರೆ

d)

ಗಾಯ

11.

ಸಾರಾ ಅಬೂಬಕರ್ ಅವರ ಕಾಲ

a)

ಕ್ರಿಸ್ತಶಕ ೧೯೨೬

b)

ಕ್ರಿಸ್ತಶಕ ೧೨೯೬

c)

ಕ್ರಿಸ್ತಶಕ ೧೯೩೬

d)

ಕ್ರಿಸ್ತಶಕ ೧೯೪೬

12.

ರಾಹಿಲನು ತುರ್ತು ಪರಿಸ್ಥಿತಿ ನಿರ್ವಹಣೆಗೆ ಹಿಡಿದುಕೊಂಡಿದ್ದು

a)

ಔಷಧ

b)

ಶಸ್ತ್ರ ಚಿಕಿತ್ಸಾ ಸಾಮಾನುಗಳ ಪೆಟ್ಟಿಗೆ

c)

ಬಂದೂಕು

d)

ಪ್ಯಾರಾಚೂಟ್

13.

ರಾಹಿಲನು ತೆವಳುತ್ತಾ ಮುದುಕಿಯ ಮನೆಯನ್ನು ಪ್ರವೇಶಿಸಲು ಕಾರಣ

a)

ಆತನ ಕೈಗೆ ಪೆಟ್ಟಾಗಿತ್ತು

b)

ಆತನ ಕಾಲಿಗೆ ಪೆಟ್ಟಾಗಿತ್ತು

c)

ಅವನಿಗೆ ಹುಟ್ಟಿನಿಂದ ನಡೆಯಲು ಬರುತ್ತಿರಲಿಲ್ಲ

d)

ಅವನಿಗೆ ಕಣ್ಣು ಕಾಣಿಸುತ್ತಿರಲಿಲ್ಲ

14.

ಮುದುಕಿಯ ಸೊಸೆಯು ಜನ್ಮ ನೀಡಿದ್ದು

a)

ಗಂಡು ಮಗುವಿಗೆ

b)

ಹೆಣ್ಣು ಮಗುವಿಗೆ

c)

ಅವಳಿ ಮಕ್ಕಳಿಗೆ

d)

ನಿರ್ಜೀವ ಮಗುವಿಗೆ

15.

ಮುದುಕಿಯ ಮನೆಯಲ್ಲಿ ಯುದ್ಧಕ್ಕೆ ಹೋದವರು

a)

ಮುದುಕಿಯ ಗಂಡ

b)

ಮುದುಕಿಯ ಮಗ

c)

ಮುದುಕಿಯ ಸೊಸೆ

d)

ಮುದುಕಿಯ ಗಂಡ ಮತ್ತು ಮಗ

16.

ಮುದುಕಿಯ ಕೈಯಲ್ಲಿದ್ದ ಚಿಕ್ಕ ದೀಪದ ಒಂದು ಭಾಗಕ್ಕೆ ಕಾಗದ ಅಂಟಿಸಲು ಕಾರಣ

a)

ಬೆಳಕು ಒಂದೇ ಕಡೆ ಹೋಗಲು

b)

ಬೆಳಕು ಹೊರಗೆ ಹೋಗದಿರಲೆಂದು

c)

ಕೈ ಸುಡಬಾರದೆಂದು

d)

ಮನೆಗೆ ಬೆಂಕಿ ಹತ್ತಬಾರದೆಂದು

17.

ರಾಹಿಲನನ್ನು ಹುಡುಕಲು ಬಂದ ಸೈನಿಕರು ನಿಶ್ಶಬ್ದವಾಗಿ ಹೊರನಡೆಯಲು ಕಾರಣ

a)

ಮಗುವಿನ ಮೃತದೇಹವನ್ನು ನೋಡಿ

b)

ಹಸಿನೆತ್ತರ ವಾಸನೆಯನ್ನು ಕಂಡು

c)

ಮುದುಕಿಯ ರೋದನವನ್ನು ಕೇಳಿ

d)

ಮಗುವಿನ ಮೃತದೇಹ ಮತ್ತು ಹಸಿನೆತ್ತರ ವಾಸನೆಯನ್ನು ಕಂಡು

18.

ರಾಹಿಲನಿಗೆ ಕೇಳಿಬಂದ ಆರ್ತನಾದ ಇವರದು

a)

ಮುದುಕಿಯ ಸೊಸೆ

b)

ಮುದುಕಿ

c)

ಮುದುಕಿಯ ಮಗ

d)

ಪೈಲಟ್

19.

ಹೆರಿಗೆ ಸಮಯದಲ್ಲಿ ಸಹಾಯ ಮಾಡುವವಳನ್ನು ಹೀಗೆನ್ನುವರು

a)

ನರ್ಸ್

b)

ಮಹಿಳಾ ಡಾಕ್ಟರ್

c)

ಮುದುಕಿ

d)

ಸೂಲಗಿತ್ತಿ

20.

ರಾಹುಲನಿಗೆ ತೀರವಿರುವುದನ್ನು ಪರಿಚಯಿಸಿದ್ದು

a)

ಗುಡುಗು

b)

ಮಿಂಚು

c)

ಕಡಲ ದೀಪ

d)

ಬೀದಿ ದೀಪ

21.

ಮಹಿಳೆಯ ಆರ್ತನಾದ ಕೇಳಿ ರಾಹಿಲನ ಮನಸ್ಸಿನಲ್ಲಿ ಮೂಡಿದ ಪ್ರಶ್ನೆಗಳು

a)

ನಾನೀಗ ಕದವನ್ನು ತಟ್ಟಿದರೆ ಪರಿಣಾಮ ಏನಾಗಬಹುದು?

b)

ಆ ಮಹಿಳೆ ಯಾವ ಅಪಾಯದಲ್ಲಿ ಸಿಲುಕಿದ್ದಾಳೆ?

c)

ಆ ಮನೆಯಲ್ಲಿ ಏನು ಸಂಭವಿಸುತ್ತಿದೆ?

d)

ಮೇಲಿನ ಎಲ್ಲವೂ

22.

ಸಾರಾ ಅಬೂಬಕರ್ ಅವರ ಹುಟ್ಟೂರು

a)

ಮಂಡ್ಯ ಜಿಲ್ಲೆಯ ಮೇಲುಕೋಟೆ

b)

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ

c)

ಕಾಸರಗೋಡು

d)

ಚಿಕ್ಕಮಗಳೂರು ಜಿಲ್ಲೆಯ ದಾರದಹಳ್ಳಿ

23.

ಕನ್ನಡ ವರ್ಣಮಾಲೆಯಲ್ಲಿ ಅವರ್ಗೀಯ ವ್ಯಂಜನಗಳ ಸಂಖ್ಯೆ

a)

೨೫

b)

೦೯

c)

೧೦

d)

೦೭

24.

ಕನ್ನಡ ವರ್ಣಮಾಲೆಯಲ್ಲಿ ಮಹಾಪ್ರಾಣಗಳ ಸಂಖ್ಯೆ

a)

೨೫

b)

೧೦

c)

೦೬

d)

೦೭

25.

ಸೂಲಗಿತ್ತಿ: ಸಜಾತಿ ಸಂಯುಕ್ತಾಕ್ಷರ :: ಆರ್ತನಾದ:

a)

ಗುಣಿತಾಕ್ಷರ

b)

ಸಂಧಿಪದ

c)

ವಿಜಾತಿ ಸಂಯುಕ್ತಾಕ್ಷರ

d)

ಸಮಾಸ ಪದ

Similar Resources on Wayground