wayground logo

Free Printable Worksheets

NEW

Font size

S
M
L
XL
Worksheets

10ನೇ ಸವಿ:ಇತಿಹಾಸ:ಅಧ್ಯಾಯ:05:ಭಾಗ 02:ನಟರಾಜ &ಭಾಗ್ವತ್

Total questions: 10

Worksheet time: 5mins

Name
Class
Date
1.

ಯುವಬಂಗಾಳಿ ಚಳವಳಿ’. ಇದನ್ನು ಪ್ರಾರಂಭಿಸಿದವರು

a)

ಹೆನ್ರಿ ವಿವಿಯನ್ ಡಿರೇಜಿಯೋ

b)

ಸ್ವಾಮಿ ವಿವೇಕಾನಂದರು

c)

ರಾಮಕೃಷ್ಣ ಪರಮಹಂಸರು

d)

ಕೊಟ್ಟಿರುವ ಯಾರೂ ಅಲ್ಲ

2.

ಯುರೋಪಿನ ಪುನರುಜ್ಜೀವನ ಚಳವಳಿಯ ಆಶಯಗಳಿಂದ ಪ್ರಭಾವಿತಗೊಂಡಿದ್ದ

ಇವರು ತಮ್ಮ ವಿದ್ಯಾರ್ಥಿಗಳು ಮತ್ತು ಸಹವರ್ತಿಗಳಲ್ಲಿ ವೈಜ್ಞಾನಿಕ ಆಲೋಚನಾ ಕ್ರಮವನ್ನು ತುಂಬುವ ಪ್ರಯತ್ನವನ್ನು ಮಾಡಿದರು

a)

ಸ್ವಾಮಿ ವಿವೇಕಾನಂದ

b)

ಹೆನ್ರಿ ವಿವಿಯನ್ ಡಿರೇಜಿಯೊ

c)

ಜ್ಯೋತಿಬಾ ಫುಲೆ

d)

ಆತ್ಮಾರಾಂ ಫಾಂಡುರಂಗ

3.

ಪ್ರಶ್ನಿಸುವ, ವೈಜ್ಞಾನಿಕ ದೃಷ್ಟಿಕೋನವನ್ನು ಮೈಗೂಡಿಸಿಕೊಳ್ಳಲು

ಬೇಕಾದ ಪ್ರೇರಣೆಯನ್ನು ಒದಗಿಸುವ ಪಠ್ಯಗಳನ್ನು ತಂದ ಇವರು ‘ಅಕಾಡೆಮಿಕ್ ಅಸೋಸಿಯೇಷನ್’ (1828) ಎನ್ನುವ ಚರ್ಚಾವೇದಿಕೆಯನ್ನು ಕಟ್ಟುವ ಮೂಲಕ ಹೊಸ ಸಂವೇದನೆಗಳನ್ನು ಹುಟ್ಟುಹಾಕಿದರು.

a)

ಅನಿಬೆಸೆಂಟ್

b)

ಹೆನ್ರಿ ವಿವಿಯನ್ ಡಿರೇಜಿಯೋ

c)

ಸ್ವಾಮಿ ವಿವೇಕಾನಂದರು

d)

ಕೊಟ್ಟಿರುವ ಯಾರೂ ಅಲ್ಲ

4.

ಕೊಟ್ಟಿರುವುದರಲ್ಲಿ ಯುವ ಬಂಗಾಳಿ ಚಳುವಳಿಯ ಕಾರ್ಯವನ್ನು ಗುರುತಿಸಿ

a)

ಯುವಬಂಗಾಳಿ ಚಳವಳಿಯು ಪ್ರಕೃತಿ, ಮಾನವೀಯತೆ, ದೇವರು ಮುಂತಾದ ವಿಷಯಗಳನ್ನು ಕುರಿತು ಚರ್ಚೆ ಮತ್ತು ಸಂವಾದಗಳನ್ನು ನಡೆಸಿತು.

b)

ಮೂಢನಂಬಿಕೆಗಳಿಂದ ತುಂಬಿದ್ದ ಸಾಮಾಜಿಕ ಮೌಢ್ಯಾಚಾರಗಳಲ್ಲೇ ಮುಳುಗಿದ್ದ ಸಮಾಜಕ್ಕೆ ಪರಿಹಾರವಿರುವುದು ಎಲ್ಲವನ್ನೂ ಎಲ್ಲರೂ ವೈಜ್ಞಾನಿಕವಾಗಿ

ನೋಡುವ ದೃಷ್ಟಿಕೋನವನ್ನು ಬೆಳೆಸಿಕೊಂಡಾಗ ಮಾತ್ರ ಎಂದು ಡಿರೇಜಿಯೋ ಪ್ರಚುರಪಡಿಸುವ ಪ್ರಯತ್ನವನ್ನು ಮಾಡಿದರು.

c)

ಮಹಿಳಾ ಹಕ್ಕುಗಳ ಪ್ರತಿಪಾದಕರಾಗಿದ್ದು ಜಾತಿಪ್ರೇರಿತ ಶೋಷಣೆಯ ವಿರೋಧಿಯಾಗಿದ್ದರು.

d)

ಕೊಟ್ಟಿರುವ ಎಲ್ಲವೂ

5.

ಹೆನ್ರಿ ವಿವಿಯನ್ ಡಿರೇಜಿಯೋ ತಮ್ಮ ಉದ್ಯೋಗಕ್ಕೆ ರಾಜೀನಾಮೆ ನೀಡಲು ಕಾರಣ

a)

ಸಹೋದ್ಯೋಗಿಗಳ ಮತ್ತು ಅವರ ಬೆಂಬಲಿಗರ ಒತ್ತಡಕ್ಕೆ

b)

ಬ್ರಿಟಿಷರ ಒತ್ತಡ

c)

ತಾಯ್ನಾಡಿನ ಒಲವು

d)

ಕೊಟ್ಟಿರುವ ಯಾವುದೂ ಅಲ್ಲ

6.

ಕಾಥೇವಾಡದಲ್ಲಿ ಆರ್ಯಸಮಾಜವನ್ನು ಆರಂಭಿಸಿದವರು.

a)

ರಾಜಾರಾಮ ಮೋಹನರಾಯರು

b)

ದಯಾನಂದ ಸರಸ್ವತಿ

c)

ರಾಮಕೃಷ್ಣ ಪರಮಹಂಸರು

d)

ಅನಿಬೆಸೆಂಟರು

7.

ದಯಾನಂದ ಸರಸ್ವತಿಯವರು ತಮ್ಮ ಆಲೋಚನಾ ಕ್ರಮವನ್ನು ಯಾವ ಗ್ರಂಥದಲ್ಲಿ ವ್ಯಕ್ತಪಡಿಸಿದ್ದಾರೆ

a)

‘ಸತ್ಯಾರ್ಥ ಪ್ರಕಾಶ’

b)

ಗುಲಾಮಗಿರಿ

c)

ಸಂವಾದ ಕೌಮುದಿ

d)

ಕೊಟ್ಟಿರುವ ಯಾವುದೂ ಅಲ್ಲ

8.

ಇವರು ಸುಧಾರಣಾವಾದಿಯೆಂಬುದಕ್ಕಿಂತ ಬದಲಿಗೆ ಪುನರುತ್ಥಾನ ವಾದಿ ಎಂದೆನಿಸಿಕೊಂಡರು.

a)

ದಯಾನಂದ ಸರಸ್ವತಿ

b)

ರಾಜಾರಾಮ ಮೋಹನರಾಯರು

c)

ಸ್ವಾಮಿ ವಿವೇಕಾನಂದರು

d)

ಜ್ಯೊತಿಬಾ ಫುಲೆ

9.

ಆರ್ಯಸಮಾಜದ ಕೇಂದ್ರ ಕಚೇರಿ

a)

ಕಾಥೇವಾಡ

b)

ಲಾಹೋರ್

c)

ಕರಾಚಿ

d)

ಕಲ್ಕತ್ತಾ

10.

ಆಧುನಿಕ ಭಾರತದ ಸಮಸ್ಯೆಗಳಿಗೆ ಪರಿಹಾರಗಳು ವೇದಗಳಲ್ಲಿವೆ ಎಂದು ಪ್ರತಿ ಪಾದಿಸಿ ‘ವೇದಗಳಿಗೆ ಮರಳಿ’ ಎಂದು ಘೊಷಿಸಿದವರು

a)

ಜ್ಯೋತಿಬಾ ಫುಲೆ

b)

ದಯಾನಂದ ಸರಸ್ವತಿ

c)

ಅನಿಬೆಸೆಂಟರು

d)

ಮದನ ಮೋಹನ ಮಾಳವೀಯರು