NEW
Font size
Worksheetslesson -2 ಗಂಧರ್ವಸೇನ 6 th C
Total questions: 15
Worksheet time: 8mins
1. ಗಂಧರ್ವಸೇನ ಈತ
ಎ) ಸೇವಕ
ಬಿ) ಊರ ಜನ
ಸಿ) ಆನೆ
ಡಿ) ಮಡಿವಾಳ್ತಿಯ ಕತ್ತೆ
2. ಶೋಕ ಪದದ ಅರ್ಥ ತಿಳಿಸಿ.
ಎ) ಸಂತೋಷ
ಬಿ) ದುಃಖ
ಸಿ) ಹಾರಾಡು
ಡಿ) ಯಾವುದು ಅಲ್ಲ
3. ರಾಜ ಒಡ್ಡೋಲಗದಲ್ಲಿದ್ದಾಗ _____ ಅಳುತ್ತಾ ಓಡಿ ಬಂದರು.
ಎ) ಸೇವಕ
ಬಿ)ರಾಣಿ
ಸಿ) ಮಂತ್ರಿ
ಡಿ) ಯಾವುದು ಅಲ್ಲ
4. ಅಂತಃಪುರ ಎಂದರೆ ________
ಎ) ರಾಣಿವಾಸ
ಬಿ) ಅರಮನೆ
ಸಿ) ರಾಜವಾಸ
ಡಿ) ಮಂತ್ರಿವಾಸ
5. ರಾಜ ವೈದ್ಯರನ್ನು ಕರೆಸಿ ಮಂತ್ರಿಗೆ ಉಪಚರಿಸುವಂತೆ ಇವರಿಗೆ ಹೇಳಿದ.
ಎ) ಸೇವಕನಿಗೆ
ಬಿ) ರಾಜಭಟರಿಗೆ
ಸಿ) ಪಡೆಯ ಮುಖ್ಯಸ್ಥನಿಗೆ
ಡಿ) ಯಾರು ಅಲ್ಲ
6. ಮಾತಿನ ಹಿನ್ನೆಲೆಯಲ್ಲಿರುವ ನಿಜವಾದ ಅರ್ಥವನ್ನು ಗ್ರಹಿಸಬೇಕಾದರೆ ಆ ಮಾತಿನ _________ ಯಲ್ಲಿ ಸ್ಪಷ್ಟತೆ ಇರಬೇಕು.
ಎ) ಸ್ವಾತಂತ್ರತೆ
ಬಿ) ಅಭಿಮಾನತೆ
ಸಿ) ಅಭಿವ್ಯಕ್ತಿ
ಡಿ) ಹಾವಭಾವತೆ
7. ಗಂಧರ್ವಸೇನ ಪಾಠವು ________ ಮೂಲದಿಂದ ಆರಿಸಲಾದ ಕತೆ .
ಎ) ಕಾದಂಬರಿ
ಬಿ)ಪ್ರಬಂಧ
ಸಿ) ಸಾಹಿತ್ಯ
ಡಿ) ಜಾನಪದ
8. ಗಂಧರ್ವಸೇನರ ಆತ್ಮಶಾಂತಿಗಾಗಿ ________ ದಿನಗಳ ಕಾಲ ಶೋಕಾಚಾರಣೆ ಮಾಡಬೇಕೆಂದು ರಾಜ ಆಜ್ಞಾಪಿಸಿದ.
ಎ) ನಾಲ್ಕು
ಬಿ)ಮೂರು
ಸಿ)ಎರಡು
ಡಿ) ಆರು
9. ‘ಕೇಳಿದ ಕಿವಿ ಊರಿಗೆ ಮಾರಿ ತಂದಿತು’ ಇದು _______
ಎ) ಒಗಟು
ಬಿ)ಗಾದೆಮಾತು
ಸಿ) ನುಡಿಗಟ್ಟು
ಡಿ) ದ್ವಿರುಕ್ತಿ
10. ಮಾರ್ನುಡಿ ಪದದ ಅರ್ಥ ಇದು
ಎ) ಪ್ರತಿಯಾಗಿ ಮಾತನಾಡು
ಬಿ) ಎದುರಾಗಿ ಮಾತಾಡು
ಸಿ) ಹಿಂದೆ ಮಾತಾಡು
ಡಿ) ಯಾವುದು ಅಲ್ಲ
11.'ಕಂಬಿ ಕೀಳು' ಈ ಪದವು
ಎ) ಒಗಟು
ಬಿ) ಗಾದೆ ಮಾತು
ಸಿ) ನಾಣ್ಣುಡಿ
ಡಿ) ನುಡಿಗಟ್ಟು
12. ರಾಜನ ಆಸ್ಥಾನಿಕರ ಮೂರ್ಖತನಕ್ಕಾಗಿ ರಾಣಿಯರು ತಮ್ಮ ___________ ನೋಯುವವರೆಗೂ ನಗುತ್ತಲೇ ಇದ್ದರು.
ಎ) ಹೃದಯ
ಬಿ) ಗಂಟಲು
ಸಿ) ಪಕ್ಕೆಲುಬು
ಡಿ) ತಲೆ
13.'ಅದೃಷ್ಟ' ಪದದ ವಿರುದ್ಧ ಪದ ಇದು
ಎ) ನಿಕೃಷ್ಟ
ಬಿ) ದುರಾದೃಷ್ಟ
ಸಿ)ಸಕೃಷ್ಟ
ಡಿ) ಯಾವುದು ಅಲ್ಲ
14.'ಚಿನ್ನದ ಪೆಟ್ಟಿಗೆಯಲ್ಲಿ ಬೆಳ್ಳಿ ಲಿಂಗ' ಇದು ಒಂದು
ಎ) ಗಾದೆ ಮಾತು
ಬಿ) ಒಗಟು
ಸಿ) ನುಡಿಗಟ್ಟು
ಡಿ) ಸಮಾನಾರ್ಥಕ
15. ಸತ್ತವರಿಗಾಗಿ ಸಂತಾಪಸೂಚಿಸುವುದನ್ನು ಹೀಗೆನ್ನುವರು
ಎ) ಶೋಕಾಚರಣೆ
ಬಿ) ಒಡ್ಡೋಲಗ
ಸಿ) ಬೊಬ್ಬಿಟ್ಟು
ಡಿ) ರೋದನ
