wayground logo

Free Printable Worksheets

NEW

Font size

S
M
L
XL
Worksheets

1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ:ಸಂದರ್ಭಗಳು-2

Total questions: 50

Worksheet time: 25mins

Name
Class
Date
1.
"ನಿಮ್ಮ ದೇಶದ ಗೌರವವನ್ನು ಕಾಯಿರಿ ! ಇದು ದೊಡ್ಡದಾದ ರಾಷ್ಟ್ರ" ವಾಕ್ಯವನ್ನು ಯಾವ ಪಾಠದಿಂದ ಆರಿಸಿಕೊಳ್ಳಲಾಗಿದೆ ಮತ್ತು ಇದರ ಆಕರ ಗ್ರಂಥ ಯಾವುದು ?
a)
ಪಾಠ - ಲಂಡನ್ ನಗರ, ಆಕರ ಗ್ರಂಥ - ಸಮುದ್ರದಾಚೆಯಿಂದ
b)
ಪಾಠ - ಭಾಗ್ಯಶಿಲ್ಪಿಗಳು, ಆಕರಗ್ರಂಥ - ಸರ್ ಎಂ. ವಿಶ್ವೇಶ್ವರಯ್ಯನವರ ಕಾರ್ಯಸಾಧನೆಗಳು
c)
ಪಾಠ - ಕೌರವೇಂದ್ರನ ಕೊಂದೆ ನೀನು , ಆಕರಗ್ರಂಥ - ಕರ್ಣಾಟ ಭಾರತ ಕಥಾಮಂಜರಿ
d)
ಪಾಠ -ಹಲಗಲಿ ಬೇಡರು ಆಕರ ಗ್ರಂಥ - ಕನ್ನಡ ಜನಪದ ಗೀತೆಗಳು
2.
'ವಿ.ಕೃ.ಗೋಕಾಕ್' ವಿರಚಿತ 'ಸಮುದ್ರದಾಚೆಯಿಂದ' ಎಂಬ ಪ್ರವಾಸ ಕಥನದಿಂದ ಆಯ್ದ 'ಲಂಡನ್ ನಗರ' ಎಂಬ ಪಾಠದಿಂದ ಆರಿಸಲಾದ ಸಂದರ್ಭದ ವಾಕ್ಯ
a)
"ನಿಮ್ಮ ದೇಶದ ಗೌರವವನ್ನು ಕಾಯಿರಿ ! ಇದು ದೊಡ್ಡದಾದ ರಾಷ್ಟ್ರ"
b)
" ಹೊತ್ತು ! ಹೊತ್ತು ! ಹೊತ್ತೇ ಹಣ ! "
c)
"ಯಾರನ್ನು ತುಳಿದರೇನು ? ಎಲ್ಲಿ ಹೆಜ್ಜೆ ಹಾಕಿದರೇನು ? ಎಲ್ಲವೂ ಅಷ್ಟೇ ಮಣ್ಣು ! ಮಣ್ಣು ! "
d)
ಈ ಎಲ್ಲವೂ ಹೌದು
3.
"ಸಾಮಾಜಿಕ ಕಾನೂನುಗಳ ಹರಿಕಾರ" - ಈ ವಾಕ್ಯವನ್ನು ಯಾವ ಪಾಠದಿಂದ ಆರಿಸಿಕೊಳ್ಳಲಾಗಿದೆ? ಮತ್ತು ಇದು ಯಾರನ್ನು ಕುರಿತು ಹೇಳಿದ್ದು ?
a)
ಲಂಡನ್ ನಗರ ಪಾಠದಿಂದ ಆರಿಸಿಕೊಳ್ಳಲಾಗಿದೆ. ಬೆನ್ ಜಾನ್ಸನ್ ಕುರಿತು ಹೇಳಿದ್ದಾಗಿದೆ.
b)
ಭಾಗ್ಯಶಿಲ್ಪಿಗಳು ಪಾಠದಿಂದ ಆರಿಸಲಾಗಿದೆ. ವಿಶ್ವೇಶ್ವರಯ್ಯನವರನ್ನು ಕುರಿತು ಹೇಳಿದ್ದಾಗಿದೆ.
c)
ಭಾಗ್ಯಶಿಲ್ಪಿಗಳು ಪಾಠದಿಂದ ಆರಿಸಲಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ರನ್ನು ಕುರಿತು ಹೇಳಿದ್ದಾಗಿದೆ.
d)
ಕೌರವೇಂದ್ರನ ಕೊಂದೆ ನೀನು ಪದ್ಯದಿಂದ ಆರಿಸಲಾಗಿದೆ. ಹೆಬಲಕ್ ಸಾಬನ್ನು ಕುರಿತು ಹೇಳಿದ್ದಾಗಿದೆ.
4.
"ಅವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಯನ್ನು ಸೇರಿಸಿತು" ಈ ವಾಕ್ಯವನ್ನು ಯಾವ ಪಾಠದಿಂದ ಆರಿಸಲಾಗಿದೆ ? ಮತ್ತು ಏನನ್ನು ಕುರಿತು ಹೇಳಿದ್ದು ?
a)
ಲಂಡನ್ ನಗರ ಪಾಠದಿಂದ ಆರಿಸಲಾಗಿದೆ. ವೂಲವರ್ಥ ಎಂಬ ಸ್ಟೇಷನರಿ ಅಂಗಡಿ ಕುರಿತು ಹೇಳಿದ್ದಾಗಿದೆ.
b)
ಭಾಗ್ಯಶಿಲ್ಪಿಗಳು ಪಾಠದಿಂದ ಆರಿಸಲಾಗಿದೆ. ಸ್ವಯಂ ಚಾಲಿತ ಬಾಗಿಲುಗಳ ಅನ್ವೇಷಣೆ ಕುರಿತು ಹೇಳಿದ್ದಾಗಿದೆ.
c)
ಭಾಗ್ಯಶಿಲ್ಪಿಗಳು ಪಾಠದಿಂದ ಆರಿಸಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತನ್ನು ಕುರಿತು ಹೇಳದ್ದಾಗಿದೆ.
d)
ಭಾಗ್ಯಶಿಲ್ಪಿಗಳು ಪಾಠದಿಂದ ಆರಿಸಲಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ ಸಾಧನೆಯನ್ನು ಕುರಿತು ಹೇಳಿದ್ದಾಗಿದೆ.
5.
"ಮೈಸೂರು ಸಂಸ್ಥಾನಕ್ಕೆ ಮಾದರಿ ಮೈಸೂರು ಎಂಬ ಕೀರ್ತಿ ಪ್ರಾಪ್ತವಾಯಿತು" ಈ ವಾಕ್ಯವನ್ನು ಯಾವ ಪಾಠದಿಂದ ಆರಿಸಲಾಗಿದೆ ?
a)
ಲಂಡನ್ ನಗರ
b)
ಭಾಗ್ಯಶಿಲ್ಪಿಗಳು
c)
ಹಲಗಲಿ ಬೇಡರು
d)
ಕೌರವೇಂದ್ರನ ಕೊಂದೆ ನೀನು
6.
"ಪ್ರಾಚೀನ ಮಹಾಕಾವ್ಯ ದಂತೆ ಇದೊಂದು ಮಹಾಕೋಶ" - ಈ ವಾಕ್ಯವನ್ನು ಯಾವ ಪಾಠದಿಂದ ಆರಿಸಲಾಗಿದೆ ? ಮತ್ತು ಯಾವುದನ್ನು ಕುರಿತು ಹೇಳಲಾಗಿದೆ?
a)
ಲಂಡನ್ ನಗರ ಪಾಠದಿಂದ ಆರಿಸಲಾಗಿದೆ. ವೂಲವರ್ಥ ಎಂಬ ಸ್ಟೇಷನರಿ ಅಂಗಡಿ ಕುರಿತು ಹೇಳಿದ್ದಾಗಿದೆ.
b)
ಭಾಗ್ಯಶಿಲ್ಪಿಗಳು ಪಾಠದಿಂದ ಆರಿಸಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತನ್ನು ಕುರಿತು ಹೇಳದ್ದಾಗಿದೆ.
c)
ಹಲಗಲಿ ಬೇಡರು ಪಾಠದಿಂದ ಆರಿಸಲಾಗಿದೆ. ಬೇಡರ ಊರನ್ನು ಕುರಿತು ಹೇಳಿದ್ದಾಗಿದೆ.
d)
ಕೌರವೇಂದ್ರನ ಕೊಂದೆ ನೀನು ಪಾಠದಿಂದ ಆರಿಸಲಾಗಿದೆ. ಕರ್ಣನ ಅರಮನೆಯನ್ನು ಕುರಿತು ಹೇಳಿದ್ದಾಗಿದೆ.
7.
"ತಾವು ಕಡಿಮೆ ಮಾತನಾಡಿದ್ದೀರಿ ; ಹೆಚ್ಚು ಕೆಲಸ ಮಾಡಿದ್ದೀರಿ " - ಈ ವಾಕ್ಯವನ್ನು ಯಾರು ಯಾರನ್ನು ಕುರಿತು ಹೇಳಿದ್ದಾಗಿದೆ ?
a)
ಜವಾಹರ್ ಲಾಲ್ ನೆಹರು - ನಾಲ್ವಡಿ ಕೃಷ್ಣರಾಜ ಒಡೆಯರನ್ನು ಕುರಿತು ಹೇಳಿದ್ದಾಗಿದೆ.
b)
ಜವಾಹರ್ ಲಾಲ್ ನೆಹರು - ವಿಶ್ವೇಶ್ವರಯ್ಯನವರನ್ನು ಕುರಿತು ಹೇಳಿದ್ದಾಗಿದೆ.
c)
ವಿ. ಕೃ. ಗೋಕಾಕ್ ಅವರು ವಿಜ್ಞಾನಿ ನ್ಯೂಟನನ್ನು ಕುರಿತು ಹೇಳಿದ್ದಾಗಿದೆ.
d)
ಕೃಷ್ಣನು - ಕರ್ಣನನ್ನು ಕುರಿತು ಹೇಳಿದ್ದಾಗಿದೆ.
8.
"ಎಲ್ಲ ಜನರಿಗೆ ಜೋರ ಮಾಡಿ ಕಸಿದು ಕೊಳ್ಳಿರಿ ಹತಾರ " ಈ ವಾಕ್ಯವನ್ನು ಯಾವ ಪಾಠದಿಂದ ಆರಿಸಲಾಗಿದೆ ?
a)
ಲಂಡನ್ ನಗರ
b)
ಭಾಗ್ಯಶಿಲ್ಪಿಗಳು
c)
ಹಲಗಲಿ ಬೇಡರು
d)
ಕೌರವೇಂದ್ರನ ಕೊಂದೆ ನೀನು
9.

"ಜೀವ ಸತ್ತು ಹೋಗುವುದು ಗೊತ್ತಾ" ಈ ವಾಕ್ಯವನ್ನು ಯಾವ ಪಾಠದಿಂದ ಆರಿಸಲಾಗಿದೆ ? ಮತ್ತು ಯಾರು ಹೇಳಿದರು ?

a)

ಹಲಗಲಿ ಬೇಡರು ಪದ್ಯದಿಂದ ಆರಿಸಲಾಗಿದೆ. ಹನುಮ, ಬಾಲ ,ಜಡಗ ,ರಾಮ -ಈ ನಾಲ್ಕು ಪ್ರಮುಖರು ಹೇಳಿದರು

b)

ಹಲಗಲಿ ಬೇಡರು ಪದ್ಯದಿಂದ ಆರಿಸಲಾಗಿದೆ. ಹೆಬಲಕ್ ಸಾಹೇಬ ಹೇಳಿದನು

c)

ಕೌರವೇಂದ್ರನ ಕೊಂದೆ ನೀನು ಪದ್ಯ ದಿಂದ ಆರಿಸಲಾಗಿದೆ. ಕೃಷ್ಣನ ಹೇಳಿದನು.

d)

ಭಾಗ್ಯಶಿಲ್ಪಿಗಳು ಪಾಠದಿಂದ ಆರಿಸಲಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರು ಹೇಳಿದರು.

10.
" ಹೊತ್ತು ! ಹೊತ್ತು ! ಹೊತ್ತೇ ಹಣ ! " - ಈ ವಾಕ್ಯದಲ್ಲಿನ ಅರ್ಥ ಸ್ವಾರಸ್ಯವೇನು ?
a)
ವಿದೇಶದಲ್ಲಿ ಸಮಯಕ್ಕೆ ಬಹಳ ಮಹತ್ವವಿರುವುದರಿಂದ ಸಮಯವೇ ಹಣ ಎನ್ನುವುದು ಅರ್ಥಸ್ವಾರಸ್ಯವಾಗಿದೆ
b)
ವಿದೇಶದಲ್ಲಿ ಸಮಯಕ್ಕೆ ಬಹಳ ಮಹತ್ವವಿಲ್ಲ ಸಮಯವೇ ಹಣವಲ್ಲ ಎನ್ನುವುದು ಅರ್ಥಸ್ವಾರಸ್ಯವಾಗಿದೆ
c)
ಸಮಯಕ್ಕಿಂತ ಹಣವೇ ಮುಖ್ಯವೆಂಬುದು ಅರ್ಥ ಸ್ವಾರಸ್ಯವಾಗಿದೆ
d)
ಹಣಕ್ಕಿಂತ ಸಮಯವೇ ಮುಖ್ಯವೆಂಬುದು ಅರ್ಥ ಸ್ವಾರಸ್ಯವಾಗಿದೆ
11.
ವಿಶ್ವೇಶ್ವರಯ್ಯನವರು ಮಾತಿಗಿಂತ ಕಾರ್ಯತತ್ಪರತೆಗೆ ಹೆಚ್ಚು ಮಹತ್ವ ಕೊಟ್ಟರು ಎಂಬ ಅರ್ಥ ಸ್ವಾರಸ್ಯದಿಂದ ಕೂಡಿರುವ ಸಂದರ್ಭದ ವಾಕ್ಯ
a)
ತಾವು ಕಡಿಮೆ ಮಾತನಾಡಿದ್ದೀರಿ ; ಹೆಚ್ಚು ಕೆಲಸ ಮಾಡಿದ್ದೀರಿ.
b)
ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿತು
c)
"ನಿಮ್ಮ ದೇಶದ ಗೌರವವನ್ನು ಕಾಯಿರಿ ! ಇದು ದೊಡ್ಡದಾದ ರಾಷ್ಟ್ರ"
d)
ಆಧುನಿಕ ಶಿಕ್ಷಣವೇ ಎಲ್ಲಾ ಸಮಸ್ಯೆಗಳಿಗೂ ಪರಮೋಚ್ಛ ಪರಿಹಾರ
12.

"ಹೊಡೆದರೊ ಗುಂಡ ಕರುಣೆ ಇಲ್ಲದಂಗ" -ಈ ವಾಕ್ಯದಲ್ಲಿನ ಅರ್ಥ ಸ್ವಾರಸ್ಯ

a)

ಹಲಗಲಿ ಬೇಡರ ನಿಷ್ಕರುಣ ಭಾವ

b)

ಬ್ರಿಟಿಷ್ ಸೈನಿಕರ ಕರುಣಾ ಭಾವ

c)

ಬ್ರಿಟಿಷ್ ಸೈನಿಕರ ನಿಷ್ಕರುಣ ಭಾವ

d)

ಹಲಗಲಿ ಬೇಡರ ಕರುಣಾ ಭಾವ

13.
"ಕೊಡುತಿವಿ ಕಬುಲ ಕೇಳರಿ ಮಾತ, ಹೋಗಬ್ಯಾಡರಿ ಸತ್ತ" ಈ ವಾಕ್ಯವು ಯಾವ ಪಾಠದಲ್ಲಿ ಬಂದಿದೆ ? ಮತ್ತು ಈ ವಾಕ್ಯವನ್ನು ಯಾರು ಯಾರಿಗೆ ಹೇಳಿದರು ?
a)
ಕೌರವೇಂದ್ರನ ಕೊಂದೆ ನೀನು ಪದ್ಯದಲ್ಲಿದೆ. ಕೃಷ್ಣ ಕರ್ಣನಿಗೆ ಹೇಳಿದನು.
b)
ಹಲಗಲಿ ಬೇಡರು ಪದ್ಯದಲ್ಲಿದೆ. ಹೆಬಲಕ್ ಸಾಬ ಹಲಗಲಿ ಬೇಡರಿಗೆ ಹೇಳಿದನು.
c)
ಹಲಗಲಿ ಬೇಡರು ಪದ್ಯದಲ್ಲಿದೆ. ಕಾರ ಸಾಹೇಬ ಹಲಗಲಿ ಬೇಡರಿಗೆ ಹೇಳಿದನು.
d)
ಭಾಗ್ಯಶಿಲ್ಪಿಗಳು ಪಾಠದ ಲ್ಲಿದೆ. ನೆಹರು ವಿಶ್ವೇಶ್ವರಯ್ಯನವರಿಗೆ ಹೇಳಿದರು.
14.
"ಮೋಸ ಮಾಡಿ ನಮ ದೇಶ ಗೆದಿತಾರೋ ಮುಂದ ನಮಗ ಘೋರ" ಈ ವಾಕ್ಯವನ್ನು ಯಾವ ಪಾಠದಿಂದ ಆರಿಸಲಾಗಿದೆ ಮತ್ತು ಯಾರು ಯಾರನ್ನು ಕುರಿತು ಹೇಳಲಾಗಿದೆ ?
a)
ಕೌರವೇಂದ್ರನ ಕೊಂದೆ ನೀನು ಪದ್ಯದಿಂದ ಆರಿಸಿಕೊಳ್ಳಲಾಗಿದೆ. ಕರ್ಣ - ಕೃಷ್ಣನನ್ನು ಕುರಿತು ಹೇಳುತ್ತಾನೆ.
b)
ಹಲಗಲಿ ಬೇಡರು ಪದ್ಯದಿಂದ ಆರಿಸಲಾಗಿದೆ. ಹೆಬಲಕ್ ಬ್ರಿಟಿಷರನ್ನು ಕುರಿತು ಹೇಳಿದನು.
c)
ಹಲಗಲಿ ಬೇಡರು ಪದ್ಯದಿಂದ ಆರಿಸಲಾಗಿದೆ. ಹನುಮ ಬ್ರಿಟಿಷರನ್ನು ಕುರಿತು ಹೇಳಿದನು.
d)
ಹಲಗಲಿ ಬೇಡರು ಪದ್ಯದಿಂದ ಆರಿಸಲಾಗಿದೆ. ಜಡಗ ಬ್ರಿಟಿಷರನ್ನು ಕುರಿತು ಹೇಳಿದನು.
15.
"ಯಾರನ್ನು ತುಳಿದರೇನು ? ಎಲ್ಲಿ ಹೆಜ್ಜೆ ಹಾಕಿದರೇನು ? ಎಲ್ಲವೂ ಅಷ್ಟೇ ಮಣ್ಣು ! ಮಣ್ಣು ! " ಈ ವಾಕ್ಯವನ್ನು ಯಾವ ಪಾಠದಿಂದ ಆರಿಸಿಕೊಳ್ಳಲಾಗಿದೆ ?
a)
ಹಲಗಲಿ ಬೇಡರು
b)
ಭಾಗ್ಯಶಿಲ್ಪಿಗಳು
c)
ಕೌರವೇಂದ್ರನ ಕೊಂದೆ ನೀನು
d)
ಲಂಡನ್ ನಗರ
16.

"ಕೆಲವೇ ಜನರ ಸ್ವತ್ತಾಗದೆ ಪ್ರಗತಿಪರ ರಾಜ್ಯದಲ್ಲಿ ಎಲ್ಲರ ಆಜನ್ಮಸಿದ್ಧ ಹಕ್ಕಾಗಬೇಕು " -ಈ ವಾಕ್ಯವನ್ನು ಅನುಸರಿಸಿ ಸರಿಯಾದ ಉತ್ತರಗಳ ಜೋಡಿ

a)

ಈ ವಾಕ್ಯವನ್ನು ಭಾಗ್ಯಶಿಲ್ಪಿಗಳು ಪಾಠದಿಂದ ಆರಿಸಲಾಗಿದೆ.

b)

ಶಿಕ್ಷಣ ಎಲ್ಲರಿಗೂ ಅತಿ ಅವಶ್ಯಕ ಎಂಬ ಮಹತ್ವವನ್ನು ಸ್ವಾರಸ್ಯ ಪೂರ್ಣವಾಗಿ ಈ ವಾಕ್ಯ ತಿಳಿಸುತ್ತದೆ.

c)

ಈ ವಾಕ್ಯವನ್ನು ಸರ್.ಎಂ. ವಿಶ್ವೇಶ್ವರಯ್ಯ ನವರು ಹೇಳಿದ್ದಾರೆ.

d)

ಎಲ್ಲಾ ವಾಕ್ಯಗಳು ಸರಿಯಾಗಿವೆ

17.
"ಕೈಗಾರಿಕರಣ ಇಲ್ಲವೆ ಅವನತಿ" ಈ ವಾಕ್ಯವನ್ನು ಯಾವ ಪಾಠದಿಂದ ಆರಿಸಿಕೊಳ್ಳಲಾಗಿದೆ? ಮತ್ತು ಅದರ ಲೇಖಕರು ಯಾರು?
a)
ಭಾಗ್ಯಶಿಲ್ಪಿಗಳು ಪಾಠದಿಂದ ಆರಿಸಲಾಗಿದೆ. ಲೇಖಕರು -ಜಯಪ್ಪಗೌಡ
b)
ಲಂಡನ್ ನಗರ ಪಾಠದಿಂದ ಆರಿಸಿಕೊಳ್ಳಲಾಗಿದೆ. ಲೇಖಕರು -ವಿ.ಕೃ.ಗೋಕಾಕ್
c)
ಕೌರವೇಂದ್ರನ ಕೊಂದೆ ನೀನು ಪದ್ಯದಿಂದ ಆರಿಸಿಕೊಳ್ಳಲಾಗಿದೆ. ಲೇಖಕರು - ಕುಮಾರವ್ಯಾಸ
d)
ಹಲಗಲಿ ಬೇಡರು ಪದ್ಯದಿಂದ ಆರಿಸಿಕೊಳ್ಳಲಾಗಿದೆ. ಲೇಖಕರು - ಬಿ.ಎಸ್. ಗದ್ದಗಿಮಠ
18.
"ಪ್ರವಾಸವು ಶಿಕ್ಷಣದ ಒಂದು ಭಾಗವಾಗಿದೆ " ಈ ವಾಕ್ಯವು ಯಾವ ಪಾಠದಲ್ಲಿ ಬಂದಿದೆ ? ಮತ್ತು ಇದು ಯಾರು ಹೇಳಿದ ಮಾತಾಗಿದೆ ?
a)
'ಕೌರವೇಂದ್ರನ ಕೊಂದೆ ನೀನು' ಪಾಠದಲ್ಲಿ ಬಂದಿದ್ದು, 'ಕೃಷ್ಣ'ನು ಹೇಳಿದ ಮಾತಾಗಿದೆ.
b)
'ಲಂಡನ್ ನಗರ' ಪಾಠದಲ್ಲಿ ಬಂದಿದ್ದು, ಬೇಕನ್ನನು ಹೇಳಿದ ಮಾತಾಗಿದೆ.
c)
ಭಾಗ್ಯಶಿಲ್ಪಿಗಳು ಪಾಠದಲ್ಲಿ ಬಂದಿದ್ದು, ನೆಹರು ಹೇಳಿದ ಮಾತಾಗಿದೆ
d)
ಲಂಡನ್ ನಗರ ಪಾಠದಲ್ಲಿ ಬಂದಿದೆ. ಶೇಕ್ಸ್ ಪಿಯರ್ ನು ಹೇಳಿದ ಮಾತಾಗಿದೆ.
19.
"ಆಧುನಿಕ ಶಿಕ್ಷಣವೇ ಎಲ್ಲಾ ಸಮಸ್ಯೆಗಳಿಗೂ ಪರಮೋಚ್ಛ ಪರಿಹಾರ"ಈ ವಾಕ್ಯವನ್ನು ಯಾವ ಪಾಠದಿಂದ ಆರಿಸಲಾಗಿದೆ? ಮತ್ತು ಯಾರು ಹೇಳಿದರು?
a)
ಭಾಗ್ಯಶಿಲ್ಪಿಗಳು ಪಾಠದಿಂದ ಆರಿಸಲಾಗಿದೆ. ವಿಶ್ವೇಶ್ವರಯ್ಯನವರು ಹೇಳಿದರು.
b)
ಭಾಗ್ಯಶಿಲ್ಪಿಗಳು ಪಾಠದಿಂದ ಆರಿಸಲಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರು ಹೇಳಿದರು.
c)
ಲಂಡನ್ ನಗರ ಪಾಠದಿಂದ ಆರಿಸಲಾಗಿದೆ. ಬೇಕನ್ನುನು ಹೇಳಿದನು.
d)
ಹಲಗಲಿ ಬೇಡರು ಪದ್ಯದಿಂದ ಆರಿಸಲಾಗಿದೆ. ರಾಮ ಹೇಳಿದನು.
20.
"ರವಿಸುತ ಕಿವಿಯಲ್ಲಿ ಬಿತ್ತಿದನು ಭಯವ" - ಈ ವಾಕ್ಯವನ್ನು ಯಾವ ಪಾಠದಿಂದ ಆರಿಸಿಕೊಳ್ಳಲಾಗಿದೆ? ಮತ್ತು ಅದರ ಆಕಾರ ಗ್ರಂಥ ಯಾವುದು ?
a)
ಕೌರವೇಂದ್ರನ ಕೊಂದೆ ನೀನು - ಕರ್ಣಾಟ ಭಾರತ ಕಥಾಮಂಜರಿ
b)
ಲಂಡನ್ ನಗರ - ಸಮುದ್ರದಾಚೆಯಿಂದ
c)
ಭಾಗ್ಯ ಶಿಲ್ಪಿಗಳು - ಸರ್ ಎಂ. ವಿಶ್ವೇಶ್ವರಯ್ಯನವರ ಕಾರ್ಯಸಾಧನೆಗಳು
d)
ಯುದ್ಧ - ಚಪ್ಪಲಿಗಳು
21.
"ಬಾಯ್ದಂಬುಲಕೆ ಕೈಯಾನುವರೆ" ಈ ವಾಕ್ಯವನ್ನು ಯಾವ ಪಾಠದಿಂದ ಆರಿಸಲಾಗಿದೆ ? ಯಾರು ಯಾರಿಗೆ ಹೇಳಿದರು ?
a)
ಹಲಗಲಿ ಬೇಡರು ಪಾಠದಿಂದ ಆರಿಸಲಾಗಿದೆ. ಹೆಬಲಕ್ ಬೇಡರಿಗೆ ಹೇಳಿದನು.
b)
ಶಬರಿ ಪಾಠದಿಂದ ಆರಿಸಲಾಗಿದೆ. ಶಬರಿ ರಾಮನಿಗೆ ಹೇಳಿದಳು.
c)
ಕೌರವೇಂದ್ರನ ಕೊಂದೆ ನೀನು ಪಾಠದಿಂದ ಆರಿಸಲಾಗಿದೆ. ಕೃಷ್ಣ ಕರ್ಣನಿಗೆ ಹೇಳಿದನು.
d)
ಲಂಡನ್ ನಗರ ಪಾಠದಿಂದ ಆರಿಸಲಾಗಿದೆ. ಲೇಖಕರು ಪ್ರವಾಸಿಗರಿಗೆ ಹೇಳಿದರು
22.
ಈ ವಾಕ್ಯವನ್ನು 'ಕುಮಾರವ್ಯಾಸ' ವಿರಚಿತ 'ಕರ್ಣಾಟ ಭಾರತ ಕಥಾಮಂಜರಿ' ಕೃತಿಯಿಂದ ಆಯ್ದ 'ಕೌರವೇಂದ್ರನ ಕೊಂದೆ ನೀನು' ಎಂಬ ಪದ್ಯದಿಂದ ಆರಿಸಿಕೊಳ್ಳಲಾಗಿದೆ
a)
ಜೀಯ ಹಸಾದವೆಂಬುದು ಕಷ್ಟ
b)
ನಿನ್ನಪದೆಸೆಯ ಬಯಸುವನಲ್ಲ
c)
ಬಾಯ್ದಂಬುಲಕೆ ಕೈಯಾನುವರೆ
d)
ಎಲ್ಲಾ ವಾಕ್ಯಗಳು
23.
"ನಿನ್ನಪದೆಸೆಯ ಬಯಸುವನಲ್ಲ " - ಈ ವಾಕ್ಯವನ್ನು ಯಾರು ಯಾರಿಗೆ ಹೇಳಿದರು ?
a)
ಕೃಷ್ಣ - ಕರ್ಣನಿಗೆ
b)
ಕರ್ಣ - ಕೃಷ್ಣನಿಗೆ
c)
ದ್ರೋಣ - ದ್ರುಪದನಿಗೆ
d)
ಕುಂತಿ - ಕರ್ಣನಿಗೆ
24.
" ಜೀಯ ಹಸಾದವೆಂಬುದು ಕಷ್ಟ " - ಈ ವಾಕ್ಯವನ್ನು ಯಾರು ಯಾರಿಗೆ ಹೇಳಿದರು ?
a)
ಕುಂತಿ - ಕರ್ಣನಿಗೆ
b)
ಕೃಷ್ಣ - ಕರ್ಣನಿಗೆ
c)
ಕರ್ಣ - ಕೃಷ್ಣನಿಗೆ
d)
ದ್ರೋಣ - ದ್ರುಪದನಿಗೆ
25.
" ನಿನ್ನಯ ವೀರರೈವರ ನೋಯಿಸೆನು" - ಈ ವಾಕ್ಯವನ್ನು ಯಾವ ಪಾಠದಿಂದ ಆರಿಸಲಾಗಿದೆ. ಮತ್ತು ಕರ್ಣ ಯಾರನ್ನು ಕುರಿತು ಈ ಮಾತನ್ನು ಹೇಳುತ್ತಾನೆ ?
a)
ಕೌರವೇಂದ್ರನ ಕೊಂದೆ ನೀನು ಪದ್ಯದಿಂದ ಆರಿಸಿಕೊಳ್ಳಲಾಗಿದೆ. ಪಾಂಡವರನ್ನು ಕುರಿತು ಹೇಳಲಾಗಿದೆ
b)
ಕೌರವೇಂದ್ರನ ಕೊಂದೆ ನೀನು ಪದ್ಯ ದಿಂದ ಆರಿಸಲಾಗಿದೆ. ಕೌರವರನ್ನು ಕುರಿತು ಹೇಳಲಾಗಿದೆ
c)
ಕೌರವೇಂದ್ರನ ಕೊಂದೆ ನೀನು ಪದ್ಯದ ಆರಿಸಲಾಗಿದೆ. ದುರ್ಯೋಧನನನ್ನು ಕುರಿತು ಹೇಳಲಾಗಿದೆ
d)
ಕೌರವೇಂದ್ರನ ಕೊಂದೆ ನೀನು ಪದ್ಯದ ಆರಿಸಿಕೊಳ್ಳಲಾಗಿದೆ ಕರ್ಣನನ್ನು ಕುರಿತು ಹೇಳಲಾಗಿದೆ.
26.
"ಮಾರಿಗೌತಣವಾಯ್ತು ನಾಳಿನ ಭಾರತವು " -ಈ ವಾಕ್ಯವನ್ನು ಯಾವ ಪಾಠದಿಂದ ಆರಿಸಲಾಗಿದೆ ಮತ್ತು ಅದರ ಕರ್ತೃ ಯಾರು ?
a)
ಲಂಡನ್ ನಗರ - ವಿ. ಕೃ. ಗೋಕಾಕ್
b)
ಹಲಗಲಿ ಬೇಡರು - ಜನಪದ ಗೀತೆಗಳು
c)
ಭಾಗ್ಯಶಿಲ್ಪಿಗಳು - ಡಿ.ಎಸ್. ಜಯಪ್ಪಗೌಡ
d)
ಕೌರವೇಂದ್ರನ ಕೊಂದೆ ನೀನು - ಕುಮಾರವ್ಯಾಸ
27.
"ಮಹಿಯ ರಾಜ್ಯದ ಸಿರಿಗೆ ಸೋಲುವನಲ್ಲ "- ಈ ವಾಕ್ಯವನ್ನು ಯಾರು ಯಾರಿಗೆ ಹೇಳುತ್ತಾರೆ ?
a)
ಕೃಷ್ಣ - ಕರ್ಣನಿಗೆ
b)
ಕರ್ಣ - ಕೃಷ್ಣನಿಗೆ
c)
ದ್ರೋಣ - ದ್ರುಪದನಿಗೆ
d)
ಭೀಷ್ಮ - ದುರ್ಯೋಧನರಿಗೆ
28.
"ನಿಮ್ಮಡಿಗಳಲ್ಲಿ ಸಮಸೇವನೆಯೆ ದೇವ " - ಈ ವಾಕ್ಯವನ್ನು
a)
ಕೌರವೇಂದ್ರನ ಕೊಂದೆ ನೀನು ಪದ್ಯ ದಿಂದ ಆರಿಸಿಕೊಳ್ಳಲಾಗಿದೆ.
b)
ಕರ್ಣನು ಕೃಷ್ಣನಿಗೆ ಹೇಳಿದನು.
c)
ಕೃಷ್ಣ ಕರ್ಣನನ್ನು ಪೀಠದಲ್ಲಿ ಕುಳ್ಳಿರಿಸಿ ಕೊಂಡಾಗ ಕರ್ಣನ ಈ ಮಾತು ಬಂದಿದೆ
d)
ಈ ಎಲ್ಲವೂ ಹೌದು
29.

"ಹೊರೆದ ದಾತಾರಂಗೆ ಹಗೆವರ ಶಿರವನರಿದೊಪ್ಪಿಸುವೆನೆಂಬೀ ಬರದೊಳಿರ್ದೆನು "ಈ ವಾಕ್ಯವನ್ನು ಯಾವ ಕೃತಿಯಿಂದ ಆರಿಸಲಾಗಿದೆ ?

a)

ಕರ್ಣಾಟ ಭಾರತ ಕಥಾಮಂಜರಿ

b)

ಸಮುದ್ರದಾಚೆಯಿಂದ

c)

ಸಾಹಸಭೀಮವಿಜಯ

d)

ವಿಕ್ರಮಾರ್ಜುನ ವಿಜಯ

30.
"ಸಮರದ ಸಾರದಲ್ಲಿ ತೋರುವೆನು ನಿಜಭುಜ ಶೌರಿಯದ ಸಂಪನ್ನ ತನವನು " - ಈ ವಾಕ್ಯವನ್ನು ಯಾರು ಯಾರಿಗೆ ಹೇಳಿದರು ?
a)
ಕೃಷ್ಣ - ಕರ್ಣನಿಗೆ
b)
ಕರ್ಣ - ಕೃಷ್ಣನಿಗೆ
c)
ದ್ರೋಣ - ದ್ರುಪದನಿಗೆ
d)
ಭೀಷ್ಮ - ದುರ್ಯೋಧನರಿಗೆ
31.
"ಸಿಡಿಲು ಸಿಡಿದಾಂಗ ಗುಂಡು ಸುರಿದಾವ" - ಈ ವಾಕ್ಯವನ್ನು ಯಾವ ಪಾಠದಿಂದ ಆರಿಸಿಕೊಳ್ಳಲಾಗಿದೆ ?
a)
ಹಲಗಲಿ ಬೇಡರು
b)
ಭಾಗ್ಯಶಿಲ್ಪಿಗಳು
c)
ಕೌರವೇಂದ್ರನ ಕೊಂದೆ ನೀನು
d)
ಲಂಡನ್ ನಗರ
32.
"ಬೂದಿ ಮಾಡ್ಯಾರೋ ಹಲಗಲಿ ಸುಟ್ಟು ಗುರ್ತುಳಿಯಲಿಲ್ಲೆಳ್ಳಷ್ಟು" - ಈ ವಾಕ್ಯವನ್ನು ಯಾವ ಪಾಠದ ಆರಿಸಿಕೊಳ್ಳಲಾಗಿದೆ ?
a)
ಕೌರವೇಂದ್ರನ ಕೊಂದೆ ನೀನು
b)
ಲಂಡನ್ ನಗರ
c)
ಹಲಗಲಿ ಬೇಡರು
d)
ಭಾಗ್ಯಶಿಲ್ಪಿಗಳು
33.
"ಪಾಂಡವ ಜನಪ ಕೌರವ ಜನಪರೋಲೈಸುವರು ಗದ್ದುಗೆಯ " - ಈ ವಾಕ್ಯವನ್ನು ಯಾರು ಹೇಳಿದರು ?
a)
ಕರ್ಣ
b)
ದುರ್ಯೋಧನ
c)
ಧರ್ಮರಾಯ
d)
ಕೃಷ್ಣ
34.
ಪಾಠ ಮತ್ತು ಆಕರ ಗ್ರಂಥಗಳ ಸರಿಯಾದ ಉತ್ತರಗಳು
a)
ಲಂಡನ್ ನಗರ - ಸಮುದ್ರದಾಚೆಯಿಂದ
b)
ಕೌರವೇಂದ್ರನ ಕೊಂದೆ ನೀನು - ಕರ್ಣಾಟ ಭಾರತ ಕಥಾಮಂಜರಿ
c)
ಭಾಗ್ಯಶಿಲ್ಪಿಗಳು - ಸರ್ ಎಂ. ವಿಶ್ವೇಶ್ವರಯ್ಯನವರ ಕಾರ್ಯಸಾಧನೆಗಳು ಮತ್ತು ಪಠ್ಯ ಪುಸ್ತಕ ರಚನಾ ಸಮಿತಿ
d)
ಎಲ್ಲವೂ ಸರಿಯಾಗಿವೆ
35.

"ಕೌರವೇಂದ್ರನ ಕೊಂದೆ ನೀನು" - ಈ ವಾಕ್ಯವನ್ನು ಯಾರು ಯಾರಿಗೆ ಹೇಳಿದರು ?

a)

ಕೃಷ್ಣ - ಕರ್ಣನಿಗೆ

b)

ಕರ್ಣ - ಕೃಷ್ಣನಿಗೆ

c)

ದ್ರೋಣ - ದ್ರುಪದನಿಗೆ

d)

ಭೀಷ್ಮ - ದುರ್ಯೋಧನರಿಗೆ

36.
ರಾಜ ಪದವಿಯನ್ನು ಬಿಟ್ಟು ದುರ್ಯೋಧನ ಹೇಳಿದಂತೆ ಕೇಳಿಕೊಂಡಿರುವ ನಿನಗೆ ಕಷ್ಟವಲ್ಲವೇ ಎಂದು ಎನ್ನುವ ಅರ್ಥ ಸ್ವಾರಸ್ಯಯುಳ್ಳ ಸಂದರ್ಭ
a)
"ಯಾರನ್ನು ತುಳಿದರೇನು ? ಎಲ್ಲಿ ಹೆಜ್ಜೆ ಹಾಕಿದರೇನು ? ಎಲ್ಲವೂ ಅಷ್ಟೇ ಮಣ್ಣು ! ಮಣ್ಣು ! "
b)
ಜೀಯ ಹಸಾದವೆಂಬುದು ಕಷ್ಟ
c)
ನಿನ್ನಪದೆಸೆಯ ಬಯಸುವನಲ್ಲ
d)
ಬಾಯ್ದಂಬುಲಕೆ ಕೈಯಾನುವರೆ
37.
"ನುಡಿದಂತೆ ನಡೆಯಲಾರದವರೆಂಬ ದೂಷಣೆಗೆ ಒಳಗಾಗಿದ್ದೇವೆ"ಈ ವಾಕ್ಯವನ್ನು ಯಾವ ಪಾಠದಿಂದ ಆರಿಸಲಾಗಿದೆ ? ಮತ್ತು ಯಾರು ಹೇಳಿದರು ?
a)
ಭಾಗ್ಯಶಿಲ್ಪಿಗಳು - ನೆಹರು ಹೇಳಿದರು
b)
ಭಾಗ್ಯಶಿಲ್ಪಿಗಳು - ವಿಶ್ವೇಶ್ವರಯ್ಯನವರ ಹೇಳಿದರು.
c)
ಲಂಡನ್ ನಗರ - ವಿ.ಕೃ. ಗೋಕಾಕ್ ಹೇಳಿದರು
d)
ಹಲಗಲಿ ಬೇಡರು - ಕಾರ ಸಾಹೇಬ ಹೇಳಿದನು
38.
"ಇಂದು ಮಾಡುವುದನ್ನು ಈಗಲೇ ಮಾಡಬೇಕೆಂಬ ತುಡಿತ ಅವರದಾಗಿತ್ತು" - ಈ ವಾಕ್ಯವನ್ನು ಯಾವ ಪಾಠದಿಂದ ಆರಿಸಿಕೊಳ್ಳಲಾಗಿದೆ ? ಮತ್ತು ಯಾರನ್ನು ಕುರಿತದ್ದಾಗಿದೆ ?
a)
ಲಂಡನ್ ನಗರ - ಕವಿಗಳನ್ನು ಕುರಿತದ್ದಾಗಿದೆ
b)
ಕೌರವೇಂದ್ರನ ಕೊಂದೆ ನೀನು - ಕೃಷ್ಣನನ್ನು ಕುರಿತದ್ದಾಗಿದೆ.
c)
ಭಾಗ್ಯಶಿಲ್ಪಿಗಳು - ವಿಶ್ವೇಶ್ವರಯ್ಯನವರನ್ನು ಕುರಿತದ್ದಾಗಿದೆ.
d)
ಭಾಗ್ಯಶಿಲ್ಪಿಗಳು - ನಾಲ್ವಡಿ ಕೃಷ್ಣರಾಜ ಒಡೆಯರನ್ನು ಕುರಿತದ್ದಾಗಿದೆ.
39.
"ಸಿನಿಮಾ ಗೃಹದಲ್ಲಿ ನಿಮ್ಮ ಜಾಗವನ್ನು ಹುಡುಕಿ ಕೊಡುವವರು ಹೆಣ್ಣು " ಈ ವಾಕ್ಯವನ್ನು ಕುರಿತ ಸರಿಯಾದ ಹೇಳಿಕೆಗಳು
a)
ಲಂಡನ್ ನಗರ ಪಾಠದಿಂದ ಆರಿಸಿಕೊಳ್ಳಲಾಗಿದೆ.
b)
ಲಂಡನ್ನಿನಲ್ಲಿ ಹೆಣ್ಣುಮಕ್ಕಳು ಹೆಚ್ಚಾಗಿ ಕೆಲಸದಲ್ಲಿ ತೊಡಗಿಸಿಕೊಂಡಿರುತ್ತಾರೆ ಎಂಬ ಸ್ವಾರಸ್ಯವನ್ನು ತಿಳಿಸುತ್ತದೆ.
c)
ಈ ವಾಕ್ಯವಿರುವ ಪಾಠದ ಆಕರ ಗ್ರಂಥ ಸಮುದ್ರದಾಚೆಯಿಂದ
d)
ಈಗ ಎಲ್ಲವೂ ಸರಿಯಾಗಿವೆ
40.
"ಒಂದೊಂದು ದೇಶದ ಮೇಲಿನ ಪ್ರಭುತ್ವ ಇಲ್ಲಿಯ ಒಂದೊಂದು ಕಚೇರಿಯಿಂದ ನಡೆಯುತ್ತಿದೆ" ಈ ವಾಕ್ಯವನ್ನು ಯಾವ ಪಾಠದಿಂದ ಆರಿಸಲಾಗಿದೆ ?
a)
ಹಲಗಲಿ ಬೇಡರು
b)
ಭಾಗ್ಯಶಿಲ್ಪಿಗಳು
c)
ಕೌರವೇಂದ್ರನ ಕೊಂದೆ ನೀನು
d)
ಲಂಡನ್ ನಗರ
41.
"ಹೆಜ್ಜೆ ಹೆಜ್ಜೆಗೆ ಇತಿಹಾಸದ ಅಡಿಗಲ್ಲುಗಳು" -ಈ ವಾಕ್ಯವನ್ನು ಯಾವ ಸಂದರ್ಭದಲ್ಲಿ ಹೇಳಲಾಗಿದೆ ?
a)
ವಿಜ್ಞಾನಿಗಳ ಮೂಲೆಗೆ ಹೋದ ಸಂದರ್ಭದಲ್ಲಿ
b)
ಬೀದಿ ಬೀದಿಗೆ ಮೂಲೆಮೂಲೆಗೆ ಇರುವ ಇತಿಹಾಸ ಪ್ರಸಿದ್ಧರನ್ನು ಕುರಿತು ಹೇಳುವಾಗ
c)
ವೂಲವರ್ಥ ಸ್ಟೇಷನರಿ ಅಂಗಡಿ ನೋಡುವ ಸಂದರ್ಭದಲ್ಲಿ
d)
ವೆಸ್ಟ್ ಮಿನಿಸ್ಟರ್ ಅಬೆ ಪ್ರಾರ್ಥನಾ ಮಂದಿರ ನೋಡುವ ಸಂದರ್ಭದಲ್ಲಿ
42.
"ಪ್ರತಿಯೊಂದು ಹೆಜ್ಜೆಯ ಬುಡಕ್ಕೆ ಬಿಜ್ಜೆಯ ಭಾರವನ್ನು ತುಳಿಯುತ್ತೇವೆ" ಈ ವಾಕ್ಯವನ್ನು ಯಾವ ಪಾಠದಿಂದ ಆರಿಸಲಾಗಿದೆ ?
a)
ಲಂಡನ್ ನಗರ
b)
ಹಲಗಲಿ ಬೇಡರು
c)
ಎದೆಗೆ ಬಿದ್ದ ಅಕ್ಷರ
d)
ಯುದ್ಧ
43.
"ಯಾವ ಸಿದ್ಧಿಯಿದಿಯೋ, ಯಾವ ಮಂತ್ರವಿದೆಯೋ ನಾನರಿಯೆ" - ಈ ವಾಕ್ಯವು ಯಾವುದರ ವಿಶೇಷತೆಯನ್ನು ಹೇಳುತ್ತದೆ ?
a)
ಕಲ್ಲು ಪಾಟಿಯ ವಿಶೇಷತೆ
b)
ವೆಸ್ಟ್ ಮಿನಿಸ್ಟರ್ ಅಬೆಯ ವಿಶೇಷತೆ
c)
ಸ್ಟೇಷನರಿ ಅಂಗಡಿಯ ವಿಶೇಷತೆ
d)
ಇವುಗಳೆಲ್ಲವೂ
44.
"ಮನೆ ಹಿಡಿದು ಇರುವ ತರುಣನ ಬುದ್ಧಿ ಮನೆಯ ಮಟ್ಟದ್ದೇ" -ಈ ವಾಕ್ಯವನ್ನು ಯಾರು ಹೇಳಿದ್ದಾರೆ ?
a)
ಬೇಕನ್
b)
ಶೇಕ್ಸ್ ಪಿಯರ್
c)
ವರ್ಡ್ಸ ವರ್ತ್
d)
ಬೆನ್ ಜಾನ್ಸನ್
45.
"ಕಾರಕೂನನ ಕಪಾಳಕ ಬಡಿದರ ಸಿಪಾಯಿ ನೆಲಕ ಬಿತ್ತ " -ಈ ವಾಕ್ಯವನ್ನು ಯಾವ ಪಾಠದಿಂದ ಆರಿಸಿಕೊಳ್ಳಲಾಗಿದೆ ?
a)
ಲಂಡನ್ ನಗರ
b)
ಹಲಗಲಿ ಬೇಡರು
c)
ಎದೆಗೆ ಬಿದ್ದ ಅಕ್ಷರ
d)
ಯುದ್ಧ
46.
'ವಿ.ಕೃ.ಗೋಕಾಕ್' ವಿರಚಿತ 'ಸಮುದ್ರದಾಚೆಯಿಂದ' ಎಂಬ ಪ್ರವಾಸ ಕಥನದಿಂದ ಆಯ್ದ 'ಲಂಡನ್ ನಗರ' ಎಂಬ ಪಾಠದಿಂದ ಆರಿಸಲಾದ ಸಂದರ್ಭದ ವಾಕ್ಯ
a)
"ಬೂದಿ ಮಾಡ್ಯಾರೋ ಹಲಗಲಿ ಸುಟ್ಟು ಗುರ್ತುಳಿಯಲಿಲ್ಲೆಳ್ಳಷ್ಟು" - ಈ ವಾಕ್ಯವನ್ನು ಯಾವ ಪಾಠದ ಆರಿಸಿಕೊಳ್ಳಲಾಗಿದೆ ?
b)
"ಮನೆ ಹಿಡಿದು ಇರುವ ತರುಣನ ಬುದ್ಧಿ ಮನೆಯ ಮಟ್ಟದ್ದೇ"
c)
"ಆಧುನಿಕ ಶಿಕ್ಷಣವೇ ಎಲ್ಲಾ ಸಮಸ್ಯೆಗಳಿಗೂ ಪರಮೋಚ್ಛ ಪರಿಹಾರ"
d)
ಈ ಎಲ್ಲವೂ ಹೌದು
47.
ಈ ವಾಕ್ಯವನ್ನು 'ಕುಮಾರವ್ಯಾಸ' ವಿರಚಿತ 'ಕರ್ಣಾಟ ಭಾರತ ಕಥಾಮಂಜರಿ' ಕೃತಿಯಿಂದ ಆಯ್ದ 'ಕೌರವೇಂದ್ರನ ಕೊಂದೆ ನೀನು' ಎಂಬ ಪದ್ಯದಿಂದ ಆರಿಸಿಕೊಳ್ಳಲಾಗಿದೆ
a)
ಬಾಯ್ದಂಬುಲಕೆ ಕೈಯಾನುವರೆ
b)
"ಬೂದಿ ಮಾಡ್ಯಾರೋ ಹಲಗಲಿ ಸುಟ್ಟು ಗುರ್ತುಳಿಯಲಿಲ್ಲೆಳ್ಳಷ್ಟು" - ಈ ವಾಕ್ಯವನ್ನು ಯಾವ ಪಾಠದ ಆರಿಸಿಕೊಳ್ಳಲಾಗಿದೆ ?
c)
"ಮನೆ ಹಿಡಿದು ಇರುವ ತರುಣನ ಬುದ್ಧಿ ಮನೆಯ ಮಟ್ಟದ್ದೇ"
d)
"ಆಧುನಿಕ ಶಿಕ್ಷಣವೇ ಎಲ್ಲಾ ಸಮಸ್ಯೆಗಳಿಗೂ ಪರಮೋಚ್ಛ ಪರಿಹಾರ"
48.

ಈ ವಾಕ್ಯವನ್ನು 'ಕುಮಾರವ್ಯಾಸ' ವಿರಚಿತ 'ಕರ್ಣಾಟ ಭಾರತ ಕಥಾಮಂಜರಿ' ಕೃತಿಯಿಂದ ಆಯ್ದ 'ಕೌರವೇಂದ್ರನ ಕೊಂದೆ ನೀನು' ಎಂಬ ಪದ್ಯದಿಂದ ಆರಿಸಿಕೊಳ್ಳಲಾಗಿದೆ

a)

ರವಿಸುತನ ಕಿವಿಯಲ್ಲಿ ಬಿತ್ತಿದನು ಭಯವ

b)

ಬೂದಿ ಮಾಡ್ಯಾರೋ ಹಲಗಲಿ ಸುಟ್ಟು ಗುರ್ತುಳಿಯಲಿಲ್ಲೆಳ್ಳಷ್ಟು

c)

"ಮನೆ ಹಿಡಿದು ಇರುವ ತರುಣನ ಬುದ್ಧಿ ಮನೆಯ ಮಟ್ಟದ್ದೇ"

d)

"ಆಧುನಿಕ ಶಿಕ್ಷಣವೇ ಎಲ್ಲಾ ಸಮಸ್ಯೆಗಳಿಗೂ ಪರಮೋಚ್ಛ ಪರಿಹಾರ"

49.

ಈ ವಾಕ್ಯವನ್ನು ಭಾಗ್ಯಶಿಲ್ಪಿಗಳು ಪಾಠದಿಂದ ಆರಿಸಿಕೊಳ್ಳಲಾಗಿದೆಈ ವಾಕ್ಯವನ್ನು ಭಾಗ್ಯಶಿಲ್ಪಿಗಳು ಪಾಠದಿಂದ ಆರಿಸಿಕೊಳ್ಳಲಾಗಿದೆ

a)

ಬೂದಿ ಮಾಡ್ಯಾರೋ ಹಲಗಲಿ ಸುಟ್ಟು ಗುರ್ತುಳಿಯಲಿಲ್ಲೆಳ್ಳಷ್ಟು

b)

"ಮನೆ ಹಿಡಿದು ಇರುವ ತರುಣನ ಬುದ್ಧಿ ಮನೆಯ ಮಟ್ಟದ್ದೇ"

c)

"ಆಧುನಿಕ ಶಿಕ್ಷಣವೇ ಎಲ್ಲಾ ಸಮಸ್ಯೆಗಳಿಗೂ ಪರಮೋಚ್ಛ ಪರಿಹಾರ"

d)

ಈ ಎಲ್ಲವೂ ಹೌದು

50.

ಈ ವಾಕ್ಯವನ್ನು ಲಂಡನ್ ನಗರ ಪಾಠದಿಂದ ಆರಿಸಿಕೊಳ್ಳಲಾಗಿದೆ

a)

"ಯಾರನ್ನು ತುಳಿದರೇನು ? ಎಲ್ಲಿ ಹೆಜ್ಜೆ ಹಾಕಿದರೇನು ?

b)

ಜೀಯ ಹಸಾದವೆಂಬುದು ಕಷ್ಟ

c)

ನಿನ್ನಪದೆಸೆಯ ಬಯಸುವನಲ್ಲ

d)

"ಸಮರದ ಸಾರದಲ್ಲಿ ತೋರುವೆನು ನಿಜಭುಜ ಶೌರಿಯದ ಸಂಪನ್ನ ತನವನು "