wayground logo

Free Printable Worksheets

NEW

Font size

S
M
L
XL
Worksheets

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( : ಹಸುರು)

Total questions: 47

Worksheet time: 24mins

Name
Class
Date
1.
'ಹಸುರು' ಕವನವನ್ನು ಬರೆದ ಕವಿ
a)
ಕುವೆಂಪು
b)
ಜಿ.ಎಸ್. ಶಿವರುದ್ರಪ್ಪ
c)
ದ.ರಾ. ಬೇಂದ್ರೆ
d)
ಕುಮಾರವ್ಯಾಸ
2.

ಕುವೆಂಪು ಅವರ ಪೂರ್ಣ ಹೆಸರು

a)

ಕುಪ್ಪಳ್ಳಿ ವೆಂಕಟಪ್ಪ ಪುರೋಹಿತ

b)

ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ

c)

ಕುಮಾರ ವೆಂಕಟಪ್ಪ ಪುಟ್ಟಣ್ಣ

d)

ಕುಪ್ಪಳ್ಳಿ ವೆಂಕಟರಮಣ ಪುಟ್ಟಣ್ಣ

3.

ಕುವೆಂಪು ಅವರ ಹುಟ್ಟೂರು

a)

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ

b)

ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳು

c)

ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿ

d)

ಮೈಸೂರು ಜಿಲ್ಲೆಯ ನಂಜನಗೂಡು

4.

ಕುವೆಂಪುರವರು ಹುಟ್ಟಿದ ವರ್ಷ

a)

ಕ್ರಿ.ಶ.1896

b)

ಕ್ರಿ.ಶ.1900

c)

ಕ್ರಿ.ಶ.1904

d)

ಕ್ರಿ.ಶ.1905

5.

ಹಸುರು ಕವನದ ಆಕರ ಗ್ರಂಥ

a)

ಕೊಳಲು

b)

ಪಾಂಚಜನ್ಯ

c)

ಪ್ರೇಮಕಾಶ್ಮೀರ

d)

ಪಕ್ಷಿಕಾಶಿ

6.

ಕುವೆಂಪುರವರು ರಚಿಸಿದ ಕೃತಿಗಳು

a)

ಕೊಳಲು,ಪಾಂಚಜನ್ಯ, ಪ್ರೇಮಕಾಶ್ಮೀರ,ಪಕ್ಷಿಕಾಶಿ

b)

ಜಲಗಾರ,ಯಮನಸೋಲು, ಬೆರಳ್ಗೆ ಕೊರಳ್

c)

ಕಾನೂರು ಹೆಗ್ಗಡತಿ,ಮಲೆಗಳಲ್ಲಿ ಮದುಮಗಳು

d)

ಇಲ್ಲಿ ಹೇಳಿರುವ ಎಲ್ಲವೂ

7.
ಕುವೆಂಪು ಅವರ ಆತ್ಮಚರಿತ್ರೆ
a)
ನೆನಪಿನ ದೋಣಿಯಲ್ಲಿ
b)
ಶ್ರೀ ರಾಮಾಯಣ ದರ್ಶನಂ
c)
ಬೊಮ್ಮನಹಳ್ಳಿಯ ಕಿಂದರಜೋಗಿ
d)
ತಪೋನಂದನ
8.

ಕುವೆಂಪುರವರಿಗೆ ದೊರೆತ ಪ್ರಶಸ್ತಿಗಳು

a)

ಜ್ಞಾನಪೀಠ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

b)

ಪಂಪ ಪ್ರಶಸ್ತಿ ಮತ್ತು ಕರ್ನಾಟಕ ರತ್ನ ಪ್ರಶಸ್ತಿ

c)

ಪದ್ಮವಿಭೂಷಣ ಪ್ರಶಸ್ತಿ

d)

ಇಲ್ಲಿ ಹೇಳಿರುವ ಎಲ್ಲಾ ಪ್ರಶಸ್ತಿಗಳು ದೊರೆತಿವೆ

9.

ಕುವೆಂಪು ಅವರಿಗೆ 'ರಾಷ್ಟ್ರಕವಿ' ಬಿರುದು ಬಂದ ವರ್ಷ

a)

1957

b)

1968

c)

1964

d)

1988

10.

ಕುವೆಂಪುರವರ ಮಹಾಕಾವ್ಯವಾದ ಶ್ರೀ ರಾಮಾಯಣ ದರ್ಶನಂ ಕೃತಿಗೆ ದೊರೆತ ಪ್ರಶಸ್ತಿಗಳು

a)

ಭಾರತೀಯ ಜ್ಞಾನಪೀಠ ಪ್ರಶಸ್ತಿ

b)

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

c)

ಪಂಪ ಪ್ರಶಸ್ತಿ

d)

ಇಲ್ಲಿ ಹೇಳಿರುವ ಎಲ್ಲವೂ

11.
ಭಾರತೀಯ ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ
a)
ಕುವೆಂಪು
b)
ದ.ರಾ ಬೇಂದ್ರೆ
c)
ವಿ. ಕೃ. ಗೋಕಾಕ್
d)
ಶಿವರಾಮ ಕಾರಂತ್
12.

ಕುವೆಂಪು ಅವರಿಗೆ ಭಾರತೀಯ ಜ್ಞಾನಪೀಠ ಪ್ರಶಸ್ತಿ ದೊರೆತ ವರ್ಷ

a)

1964

b)

1968

c)

1988

d)

1992

13.

ಕುವೆಂಪುರವರು ಯಾವ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದರು

a)

ಗುಲ್ಬರ್ಗ ವಿಶ್ವವಿದ್ಯಾನಿಲಯ

b)

ಬೆಂಗಳೂರು ವಿಶ್ವವಿದ್ಯಾನಿಲಯ

c)

ಮೈಸೂರು ವಿಶ್ವವಿದ್ಯಾನಿಲಯ

d)

ಕರ್ನಾಟಕ ವಿಶ್ವವಿದ್ಯಾನಿಲಯ

14.

ಇವರಲ್ಲಿ ರಾಷ್ಟ್ರಕವಿ ಎಂದು ಪ್ರಖ್ಯಾತರಾದವರು

a)

ಎಂ. ಗೋವಿಂದ ಪೈ

b)

ಕುವೆಂಪು

c)

ಜಿ.ಎಸ್. ಶಿವರುದ್ರಪ್ಪ

d)

ಈ ಮೂವರು

15.

ಕುವೆಂಪುರವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿದೆ ವಿಶ್ವವಿದ್ಯಾನಿಲಯಗಳು

a)

ಮೈಸೂರು ಮತ್ತು ಕರ್ನಾಟಕ ವಿಶ್ವವಿದ್ಯಾಲಯಗಳು

b)

ಬೆಂಗಳೂರು ವಿಶ್ವವಿದ್ಯಾನಿಲಯ

c)

ಗುಲ್ಬರ್ಗ ವಿಶ್ವವಿದ್ಯಾನಿಲಯ

d)

ಇಲ್ಲಿ ಹೇಳಿರುವ ಎಲ್ಲ ವಿಶ್ವವಿದ್ಯಾ ನಿಲಯಗಳು

16.

ಧಾರವಾಡದಲ್ಲಿ ನಡೆದ 39ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು

a)

ದ.ರಾ. ಬೇಂದ್ರೆ

b)

ಕುವೆಂಪು

c)

ಜಿ.ಎಸ್. ಶಿವರುದ್ರಪ್ಪ

d)

ಪು.ತಿ. ನರಸಿಂಹಾಚಾರ್ಯ

17.

ಕುವೆಂಪುರವರು ಮಕ್ಕಳಿಗಾಗಿ ಬರೆದ ಕೃತಿಗಳು

a)

ಅಮಲನ ಕಥೆ

b)

ಮೋಡಣ್ಣನ ತಮ್ಮ

c)

ಬೊಮ್ಮನಹಳ್ಳಿಯ ಕಿಂದರಿಜೋಗಿ

d)

ಇಲ್ಲಿ ಹೇಳಿರುವ ಎಲ್ಲವೂ

18.

ಈ ಸಾಲನ್ನು ಪೂರ್ಣಗೊಳಿಸಿ : ಹಕ್ಕಿಯ ಕೊರಲಿಂಪು ಹಸುರು -----

a)

ಎಲರಿನ ತಂಪು ಹಸುರು

b)

ಹಸುರು ಹಸುರಿಳೆಯುಸಿರೂ !

c)

ಹಸುರು ಸಂಜೆಯೀ ಬಿಸಿಲು

d)

ಹೊಸ ಹೂವಿನ ಕಂಪು ಹಸುರು

19.

ಕುವೆಂಪು ಅವರಿಗೆ ಸೌಂದರ್ಯಾನುಭವ ಉಂಟಾಗಿ "ಹಸುರು" ಕವನ ರಚನೆಗೆ ಪ್ರೇರಕವಾದ ಸ್ಥಳ ಇದು.

a)

ಅಶ್ವೀಜದ ಶಾಲಿವನ

b)

ಧಾರವಾಡದ ಸಾಹಿತ್ಯ ಸಮ್ಮೇಳನ

c)

ಕುಪ್ಪಳ್ಳಿಯ ಕವಿಶೈಲ

d)

ಮೈಸೂರಿನ ವಿಶ್ವ ವಿದ್ಯಾನಿಲಯ

20.

ಕವಿ ಮತ್ತು ಪ್ರಕೃತಿ ಒಂದಾಗುವ ಕುವೆಂಪು ಅವರ ಕಾವ್ಯದ ಸ್ಥಿತಿ ಇದಾಗಿದೆ.

a)

ದ್ವೈತ

b)

ವಿಶಿಷ್ಟಾದ್ವೈತ

c)

ಶಕ್ತಿ ವಿಶಿಷ್ಟಾದ್ವೈತ

d)

ಅದ್ವೈತ

21.

ಆಶ್ವಯುಜ ಮಾಸದ ನವರಾತ್ರಿದಿನ ಪ್ರಕೃತಿಯಲ್ಲಿ ಹೆಪ್ಪುಗಟ್ಟಿದ ಹಚ್ಚ ಹಸಿರನ್ನು ಕಂಡು ಪ್ರೇರಿತವಾದ ಕವನ

a)

ಸಂಕಲ್ಪ ಗೀತೆ

b)

ಹಕ್ಕಿಹಾರುತಿದೆ ನೋಡಿದಿರಾ !

c)

ಹಸುರು

d)

ಹೊಸ ಹಾಡು

22.
ಆಶ್ವಯುಜದ ಭತ್ತದ ಗದ್ದೆಯ ಬಣ್ಣ ಯಾವ ಹಸಿರಿನಂತಿದೆ ?
a)
ಗಿಳಿಯ ಹಸುರಿನಂತೆ
b)
ಮಕಮಲ್ಲಿನ ಹಸುರಿನಂತೆ
c)
ಹಕ್ಕಿಯ ಹಸಿರಿನಂತೆ
d)
ಹೂವಿನ ಹಸಿರಿನಂತೆ
23.

ಕವಿಯು ನೋಡಿದ ಅಡಕೆ ತೋಟ ಎಲ್ಲಿದೆ ?

a)

ಕಡಲಿನಲ್ಲಿ

b)

ಆಗಸದಲ್ಲಿ

c)

ಬನದಂಚಿನಲ್ಲಿ

d)

ಗದ್ದೆಯ ಬಯಲಲ್ಲಿ

24.
ಕವಿಗೆ 'ಮಕಮಲ್ಲಿನ ಹೊಸ ಪಚ್ಚೆಯ ಜಮಖಾನೆ' ರೀತಿಯಲ್ಲಿ ಕಂಡಿರುವುದು
a)
ಹುಲ್ಲಿನ ಹಾಸು
b)
ಹಸುರು ಗದ್ದೆಯ ಬಯಲು
c)
ಹಸಿರು ಮುಗಿಲು
d)
ಹಸುರಾಗಸ
25.

ಹಸುರು ಪದ್ಯದಲ್ಲಿ "ಜಮಖಾನೆ" ಆಗಿರುವುದು ಇದರಿಂದ.

a)

ಎಲರಿನ ತಂಪಿನಿಂದ

b)

ಸಂಜೆಯ ಬಿಸಿಲಿನಿಂದ

c)

ಗಿಳಿಯದೆಯ ಬಣ್ಣದಿಂದ

d)

ಮಕಮಲ್ಲಿನ ಪೊಸಪಚ್ಚೆಯಿಂದ

26.

ಕವಿಗೆ ಎಲ್ಲೆಲ್ಲಿ ಹಸುರು ಕಾಣುತ್ತಿದೆ ?

a)

ಆಗಸ, ಮುಗಿಲು, ಗದ್ದೆಯ ಬಯಲು, ಮಲೆ, ಕಣಿವೆ, ಸಂಜೆಯ ಬಿಸಿಲಿನಲ್ಲಿ

b)

ಹಕ್ಕಿಯ ಕೊರಳಿನ ಇಂಪಿನಲ್ಲಿ ಮತ್ತು ಇಳೆಯ ಉಸಿರಿನಲ್ಲಿ

c)

ಹೂವಿನ ಕಂಪಿನಲ್ಲಿ ಮತ್ತು ಎಲರಿನ ತಂಪಿನಲ್ಲಿ

d)

ಇಲ್ಲಿ ಹೇಳಿದ ಎಲ್ಲವುಗಳಲ್ಲಿ

27.
ಕುವೆಂಪುರವರು ಪ್ರಕೃತಿಯಲ್ಲಿ ಹೆಪ್ಪುಗಟ್ಟಿದ ಹಚ್ಚ ಹಸುರನ್ನು ಯಾವಾಗ ಕಂಡರು ?
a)
ಆಶ್ವಯುಜ ಮಾಸದ ನವರಾತ್ರಿ ದಿನ
b)
ಚೈತ್ರಮಾಸದ ಯುಗಾದಿ ದಿನ
c)
ರಾಮಲಕ್ಷ್ಮಣರನ್ನು ಶಬರಿ ನೋಡಿದ ದಿನ
d)
ಶಾನುಭೋಗರು ಹುಲಿಯನ್ನು ನೋಡಿದ ಸಮಯ
28.
ಕವಿ ಕುವೆಂಪು ಅವರ ಪ್ರಕಾರ "ಹಸುರ್ ನೆತ್ತರ್" ಇರುವುದು ಇಲ್ಲಿ.
a)
ಒಡಲು
b)
ಕಡಲು
c)
ಅಡಿಕೆಯ ತೋಟ
d)
ಬತ್ತದ ಗದ್ದೆ
29.

ಈ ಸಾಲನ್ನು ಪೂರ್ಣಗೊಳಿಸಿ : ಹಸುರಾದುದು ಕವಿಯಾತ್ಮ ------------

a)

ರಸಪಾನ ಸ್ನಾನದಲ್ಲಿ

b)

ಹಸುರ್ ನೆತ್ತರ್ ಒಡಲಿನಲ್ಲಿ

c)

ಹಸುರೆತ್ತಲ್ ಕಡಲಿನಲಿ

d)

ಈ ಶ್ಯಾಮಲ ವನಧಿಯಲಿ

30.

ಈ ಸಾಲನ್ನು ಪೂರ್ಣಗೊಳಿಸಿ : ನವರಾತ್ರಿಯ ನವಧಾತ್ರಿಯ ------------

a)

ರಸಪಾನ ಸ್ನಾನದಲ್ಲಿ

b)

ಹಸುರ್ ನೆತ್ತರ್ ಒಡಲಿನಲ್ಲಿ

c)

ಹಸುರೆತ್ತಲ್ ಕಡಲಿನಲಿ

d)

ಈ ಶ್ಯಾಮಲ ವನಧಿಯಲಿ

31.

ಈ ಸಾಲನ್ನು ಪೂರ್ಣಗೊಳಿಸಿ : ಹಸುರತ್ತಲ್ ಹಸುರಿತ್ತಲ್ : ------------

a)

ರಸಪಾನ ಸ್ನಾನದಲ್ಲಿ

b)

ಹಸುರ್ ನೆತ್ತರ್ ಒಡಲಿನಲ್ಲಿ

c)

ಹಸುರೆತ್ತಲ್ ಕಡಲಿನಲಿ

d)

ಈ ಶ್ಯಾಮಲ ವನಧಿಯಲಿ

32.

ಈ ಸಾಲನ್ನು ಪೂರ್ಣಗೊಳಿಸಿ : ಹಸುರ್ಗಟ್ಟಿತೊ ಕವಿಯಾತ್ಮಂ

a)

ರಸಪಾನ ಸ್ನಾನದಲ್ಲಿ

b)

ಹಸುರ್ ನೆತ್ತರ್ ಒಡಲಿನಲ್ಲಿ

c)

ಹಸುರೆತ್ತಲ್ ಕಡಲಿನಲಿ

d)

ಈ ಶ್ಯಾಮಲ ವನಧಿಯಲಿ

33.

ಚೈತ್ರ ಮಾಸದಿಂದ ಏಳನೆಯ ಮಾಸ ಇದು

a)

ವೈಶಾಖ

b)

ಶ್ರಾವಣ

c)

ಭಾದ್ರಪದ

d)

ಅಶ್ವೀಜ

34.
ಬಿಟ್ಟ ಸ್ಥಳ ತುಂಬಿರಿ : ಹೊಸ ಹೂವಿನ-------------ಹಸುರು
a)
ಕಂಪು
b)
ಶ್ಯಾಮಲ
c)
ತಂಪೂ
d)
ಇಂಪೂ
35.

ಬಿಟ್ಟ ಸ್ಥಳ ತುಂಬಿರಿ : ಎಲರಿನ -----------ಹಸುರು

a)

ಕಂಪು

b)

ಶ್ಯಾಮಲ

c)

ತಂಪೂ

d)

ಇಂಪೂ

36.

ಬಿಟ್ಟ ಸ್ಥಳ ತುಂಬಿರಿ : ಹಕ್ಕಿಯ ------------ಹಸುರು

a)

ಬಣ್ಣ

b)

ಗರಿ

c)

ಪುಚ್ಚ

d)

ಕೊರಲಿಂಪು

37.
ಬನದ ಅಂಚಲ್ಲಿ ಇರುವುದು
a)
ಗೊನೆ ಬಿಟ್ಟ ಅಡಕೆಯ ತೋಟ
b)
ಗೊನೆ ಬಿಟ್ಟ ಬಾಳೆಯ ತೋಟ
c)
ಗೊನೆ ಬಿಟ್ಟ ತೆಂಗಿನ ತೋಟ
d)
ಈ ಎಲ್ಲವೂ
38.

ಕವಿ ಕುವೆಂಪು ಅವರಿಗೆ ಸಂಜೆಯ ಬಿಸಿಲು ಹೇಗೆ ಕಂಡಿದೆ?

a)

ಹಳದಿಯಾಗಿ

b)

ಕೆಂಪಾಗಿ

c)

ಹಸುರಾಗಿ

d)

ಕರಿನರೆ ಬಣ್ಣವಾಗಿ

39.

ಪಸರಿಸಿ ತಿರೆ ಮೈ ಮುಚ್ಚಿರೆ_ ಈ ಸಾಲಿನಲ್ಲಿ 'ತಿರೆ' ಪದದರ್ಥ ಇದು.

a)

ಗೊನೆ

b)

ಭೂಮಿ

c)

ಕಪ್ಪು

d)

ಕತ್ತಲು

40.
ಕುವೆಂಪುರವರಿಗೆ ಹಕ್ಕಿಯ ಕೊರಳಿನ ಇಂಪಾದ ಧ್ವನಿ ಹೇಗೆ ಕಂಡಿದೆ ?
a)
ಹಸುರಾಗಿ
b)
ಉಸಿರಾಗಿ
c)
ಹೆಸರಾಗಿ
d)
ಮೃಧುವಾಗಿ
41.
ಕವಿಯ ಆತ್ಮ ಎಲ್ಲಿ ಹಸುರ್ಗಟ್ಟಿದೆ ?
a)
ಒಡಲಿನ ನೆತ್ತರಿನಲ್ಲಿ
b)
ಕಡಲಿನ ಅಲೆಗಳಲ್ಲಿ
c)
ಸುರಿಯುವ ಮಳೆಯಲ್ಲಿ
d)
ಸುಡುವ ಬಿಸಿಲಿನಲ್ಲಿ
42.

'ಎಲರ್ ' - ' ವನಧಿ ' : ಕ್ರಮವಾಗಿ ಈ ಪದಗಳ ಅರ್ಥ.

a)

ತಂಪು - ಸಮುದ್ರ

b)

ಗಾಳಿ - ಸಮುದ್ರ

c)

ಹೂವು - ಶಾಲೀವನ

d)

ಗಾಳಿ - ಇಳೆ

43.
ಈ ಸಾಲನ್ನು ಪೂರ್ಣಗೊಳಿಸಿ : ಪಸರಿಸಿ ತಿರೆ ಮೈ ಮುಚ್ಚಿರೆ ------------
a)
ಬೇರೆ ಬಣ್ಣವನೆ ಕಾಣೆ !
b)
ಹೊಸಪಚ್ಚೆಯ ಜಮಖಾನೆ
c)
ಕೊನೆವೆತ್ತಡಕೆಯ ತೋಟ
d)
ಗಿಳಿಯದೆ ಬಣ್ಣದ ನೋಟ
44.

ಈ ಸಾಲನ್ನು ಪೂರ್ಣಗೊಳಿಸಿ : ಅಶ್ವೀಜದ ಶಾಲಿವನದ ----------

a)

ಬೇರೆ ಬಣ್ಣವನೆ ಕಾಣೆ !

b)

ಹೊಸಪಚ್ಚೆಯ ಜಮಖಾನೆ

c)

ಕೊನೆವೆತ್ತಡಕೆಯ ತೋಟ

d)

ಗಿಳಿಯದೆ ಬಣ್ಣದ ನೋಟ

45.

ಪೊಸ ಪಚ್ಚೆಯ ಜಮಖಾನೆ ಪಸರಿಸಿದಾಗ

a)

ಭೂಮಿಯು ಪ್ರಜ್ವಲಿಸಿದೆ

b)

ಭೂಮಿಯ ಮೈ ಮುಚ್ಚಿದೆ

c)

ಭೂಮಿಯ ಮೈ ತೆರೆದಿದೆ

d)

ಭೂಮಿಯು ಕಂಪಿಸಿದೆ

46.

ಕುವೆಂಪುರವರ ಪ್ರಕಾರ ಹಸುರಾಗಿರುವುದು

a)

ಆಗಸ

b)

ಮುಗಿಲು

c)

ಕಣಿವೆ

d)

ಇಲ್ಲಿನ ಎಲ್ಲವೂ

47.

ಕವಿ ಹೇಳಿರುವ ಪ್ರಕಾರ ಹಸುರಾಗಿರುವ ಇಂದ್ರಿಯ ಸಂಬಂಧಿತವಾದವುಗಳು

a)

ಹೂವಿನ ಕಂಪು

b)

ಎಲರಿನ ತಂಪು

c)

ಇಳೆಯ ಉಸಿರು ಮತ್ತು ಹಕ್ಕಿಯ ಕೊರಳಿನ ಇಂಪು

d)

ಇಲ್ಲಿ ಹೇಳಿರುವ ಎಲ್ಲವೂ