wayground logo

Free Printable Worksheets

NEW

Font size

S
M
L
XL
Worksheets

SSLC:S.Sci:BS:04:ರಚನೆ:ನಟರಾಜ್ &ಭಾಗ್ವತ್

Total questions: 25

Worksheet time: 13mins

Name
Class
Date
1.

ಸೇವೆ ಮತ್ತು ವಸ್ತುಗಳನ್ನು ಬಳಸುವವರನ್ನು ಸ್ವಯಂ ಸೇವಾ ಸಂಸ್ಥೆಗಳು ಹೀಗೆ ಕರೆದರು .

a)

ಉತ್ಪಾದಕ

b)

ಪೂರೈಕೆದಾರ

c)

ಬಳಕೆದಾರ

d)

ಮೇಲಿನ ಯಾರೂ ಅಲ್ಲ

2.

ಬಳಕೆದಾರರಿಂದ ಹಣ ಪಡೆದು ವಸ್ತು ಅಥವಾ ಸೇವೆಗಳನ್ನು ನೀಡುವವರನ್ನು ಹೀಗೆ ಕರೆಯುವರು.

a)

ಉತ್ಪಾದಕ

b)

ಗ್ರಾಹಕ

c)

ದಲ್ಲಾಳಿ

d)

ಪೂರೈಕೆದಾರ

3.

ಭಾರತದಲ್ಲಿ ಯೋಜನಾ ಆಯೋಗವು ಭಾರತದ ಗ್ರಾಹಕ ಸಂಘದ ಸ್ಥಾಪನೆಗೆ ಒತ್ತು ಕೊಟ್ಟಿದ್ದು.

a)

1956

b)

1957

c)

1958

d)

1959

4.

ಮಾಹಿತಿ ತಂತ್ರಜ್ಞಾನದ ಬೆಳವಣೆಗೆಯಿಂದ ಇಂದು ಮನೆಯಲ್ಲೇ ಕುಳಿತು ವಸ್ತುಗಳನ್ನು ಕೊಳ್ಳಬಹುದಾಗಿದೆ. ಇದನ್ನು ಹೀಗೆ ಕರೆಯುವರು.

a)

ಷಾಪಿಂಗ್

b)

ಟೆಲಿಷಾಪಿಂಗ್

c)

ಹೋಮ್ ಷಾಪಿಂಗ್

d)

ಮೇಲಿನ ಯಾವುದೂ ಅಲ್ಲ

5.

ಯಾವುದೇ ವ್ಯವಹಾರವನ್ನು ಲಾಭದ ಉದ್ದೇಶಕ್ಕಾಗಿ ಮಾಡಿದರೆ ಅದನ್ನು ಹೀಗೆನ್ನುತ್ತೇವೆ.

a)

ಮಾರಾಟ

b)

ವ್ಯಾಪಾರ

c)

ದಲ್ಲಾಳಿ

d)

ವಂಚನೆ

6.

ಗ್ರಾಹಕನನ್ನು ಹೀಗೆ ಕರೆಯಲಾಗಿದೆ

a)

ಕೊಳ್ಳುವವ

b)

ಉತ್ಪಾದಕ ರಾಜ

c)

ಮಾರುಕಟ್ಟೆಯ ರಾಜ

d)

ಮಾರಾಟಗಾರ ರಾಜ

7.

ಗ್ರಾಹಕರನ್ನು ಉತ್ಪಾದಕರ ಮತ್ತು ವ್ಯಾಪಾರಿಗಳ ಶೋಷಣೆಯಿಂದ ರಕ್ಷಿಸಲು ಕೈಗೊಂಡಿರುವ ಕಾರ್ಯಗಳನ್ನು ಹೀಗೆನ್ನುತ್ತಾರೆ.

a)

ವ್ಯಾಪಾರಿಗಳ ರಕ್ಷಣೆ

b)

ದಲ್ಲಾಳಿಗಳ ರಕ್ಷಣೆ

c)

ಉತ್ಪಾದಕರ ರಕ್ಷಣೆ

d)

ಗ್ರಾಹಕ ರಕ್ಷಣೆ

8.

ವಿಶ್ವ ಗ್ರಾಹಕ ಆಂದೋಲನದ ಚರಿತ್ರೆಯಲ್ಲಿ ಇದು ಒಂದು ಮಹತ್ವದ ದಿನವಾಗಿದೆ.

a)

ಮಾರ್ಚ್ 15, 1963

b)

ಮಾರ್ಚ್ 15, 1962

c)

ಮಾರ್ಚ್ 15, 1964

d)

ಮಾರ್ಚ್ 15, 1965

9.

ಅಮೆರಿಕದ ಅಧ್ಯಕ್ಷರಾಗಿದ್ದ ಜಾನ್ ಎಫ್. ಕೆನಡಿ ಅವರು ಅಲ್ಲಿನ ನಾಗರಿಕರಿಗೆ ಸಂರಕ್ಷತೆ, ಮಾಹಿತಿ,ನಿವೇದನೆ ಮತ್ತು ಪರಿಹಾರ ಎಂಬ ನಾಲ್ಕು ಹಕ್ಕುಗಳನ್ನು ನೀಡುವ ವಿಧೇಯಕವನ್ನು ಅಂಗೀಕರಿಸಿದ ಕಾರಣದಿಂದ ಪ್ರತಿ ವರ್ಷವು ವಿಶ್ವಗ್ರಾಹಕರ ಹಕ್ಕುಗಳ ದಿನವನ್ನು ಈ ದಿನದಂದು ಆಚರಿಸಲಾಗುತ್ತದೆ.

a)

ಮಾರ್ಚ್ 16

b)

ಮಾರ್ಚ್ 17

c)

ಮಾರ್ಚ್ 15

d)

ಮಾರ್ಚ್ 18

10.

ಪರಿಹಾರ ಮೊತ್ತವು 20 ಲಕ್ಷ ರೂಪಾಯಿಗಳಿಗಿಂತ ಹೆಚ್ಚಾಗಿರದ ಗ್ರಾಹಕರ ದೂರುಗಳನ್ನು ಈ ಆಯೋಗಕ್ಕೆ ಸಲ್ಲಿಸಬೇಕು.

a)

ರಾಷ್ಟ್ರೀಯ ಆಯೋಗ

b)

ರಾಜ್ಯ ಆಯೋಗ

c)

ಜಿಲ್ಲಾ ವೇದಿಕೆ

d)

ಯಾವುದು ಅಲ್ಲ

11.

ಪರಿಹಾರ ಮೊತ್ತವು 20 ಲಕ್ಷ ರೂಪಾಯಿಗಳಿಗಿಂತ ಹೆಚ್ಚಾಗಿದ್ದು ಒಂದು ಕೋಟಿ ರೂಪಾಯಿಯ ವರೆಗಿನ ಮೌಲ್ಯದ ಗ್ರಾಹಕ ದೂರುಗಳನ್ನು ಈ ಆಯೋಗಕ್ಕೆ ಸಲ್ಲಿಸಬೇಕು.

a)

ರಾಜ್ಯ ಆಯೋಗ

b)

ರಾಷ್ಟ್ರೀಯ ಆಯೋಗ

c)

ಜಿಲ್ಲಾ ವೇದಿಕೆ

d)

ಯಾವುದು ಅಲ್ಲ

12.

ಪರಿಹಾರ ಮೊತ್ತವು ಒಂದು ಕೋಟಿ ರೂಪಾಯಿಗಿಂತ ಹೆಚ್ಚು ಮೌಲ್ಯದಿಂದ ಕೂಡಿದ್ದರೆ ಅಂತಹ ದೂರುಗಳನ್ನು ಈ ಆಯೋಗಕ್ಕೆ ಸಲ್ಲಿಸಬೇಕು.

a)

ರಾಷ್ಟ್ರೀಯ ಆಯೋಗ

b)

ಜಿಲ್ಲಾ ವೇದಿಕೆ

c)

ರಾಜ್ಯ ಆಯೋಗ

d)

ಯಾವುದು ಅಲ್ಲ

13.

ಗ್ರಾಹಕನು ನೀಡುವ ಹಣಕ್ಕೆ ಪ್ರತಿಫಲವಾಗಿ ಯೋಗ್ಯಮಟ್ಟದ ವಸ್ತು ಮತ್ತು ಸೇವೆಗಳನ್ನು ಒದಗಿಸುವುದು ಇವರ ಕರ್ತವ್ಯ

a)

ಪೂರೈಕೆದಾರರ

b)

ವ್ಯಾಪಾರಿಗಳ

c)

ಪೂರೈಕೆದಾರರ &ವ್ಯಾಪಾರಿಗಳ

d)

ಮೇಲಿನ ಯಾರೂ ಅಲ್ಲ

14.
ಗ್ರಾಹಕ ಸಂರಕ್ಷಣೆಯ ಆಂದೋಲನ ಮೊದಲಿಗೆ ಈ ದೇಶದಲ್ಲಿ ಪ್ರಾರಂಭವಾಯಿತು
a)
ಅಮೆರಿಕದ ಸಂಯುಕ್ತ ಸಂಸ್ಥಾನಗಳಲ್ಲಿ
b)
ಭಾರತದಲ್ಲಿ
c)
ಚೀನಾದಲ್ಲಿ
d)
ಇಂಗ್ಲೆಂಡ್ ನಲ್ಲಿ
15.

ಮೊಟ್ಟಮೊದಲು ಭಾರತದಲ್ಲಿ ಮಹಿಳೆಯರಿಂದ ಅವೇರ್ ಎಂಬ ಸಂಸ್ಥೆ ಇಲ್ಲಿ ಪ್ರಾರಂಭವಾಯಿತು

a)

ಬೆಂಗಳೂರು

b)

ಮುಂಬೈ

c)

ದೆಹಲಿ

d)

ಕೊಲ್ಕತ್ತಾ

16.

ಭಾರತದಲ್ಲಿ ಗ್ರಾಹಕರ ರಕ್ಷಣೆಗಾಗಿ ಜಾರಿಗೆ ತಂದಿರುವ ಕಾಯ್ದೆಗಳು

a)

ಅಗತ್ಯ ವಸ್ತುಗಳ ಕಾಯ್ದೆ

b)

ತೂಕ ಮತ್ತು ಅಳತೆ ಕಾಯ್ದೆ

c)

ಆಹಾರ ಕಲಬೆರಕೆ ಪ್ರತಿಬಂಧಕ ಕಾಯ್ದೆ

d)

ಮೇಲಿನ ಎಲ್ಲಾ

17.

ಗ್ರಾಹಕ ರಕ್ಷಣೆಗಾಗಿ ಭಾರತ ಸರ್ಕಾರವು 1986ರಲ್ಲಿ ಜಾರಿಗೆ ತಂದಿರುವ ಈ ಕಾಯ್ದೆಯು ಅತ್ಯಂತ ಮಹತ್ವದ್ದು

a)

ಆಹಾರ ಕಲಬೆರಕೆ ಪ್ರತಿಬಂಧಕ ಕಾಯ್ದೆ

b)

ಗ್ರಾಹಕ ಸಂರಕ್ಷಣಾ ಕಾಯ್ದೆ

c)

ತೂಕ ಮತ್ತು ಅಳತೆ ಕಾಯ್ದೆ

d)

ಅಗತ್ಯ ವಸ್ತುಗಳ ಕಾಯ್ದೆ

18.

ಗ್ರಾಹಕ ಸಂರಕ್ಷಣಾ ಕಾಯ್ದೆಯ ಪ್ರಮುಖ ಉದ್ದೇಶ ಗ್ರಾಹಕರ /ಗ್ರಾಹಕರನ್ನು

a)

ಸುರಕ್ಷತೆ ಹಾಗೂ ಗುಣಮಟ್ಟಕ್ಕೆ ಮೊದಲ ಪ್ರಾಶಸ್ತ್ಯ ನೀಡುವುದು.

b)

ಅಪಾಯಕಾರಿ ವಸ್ತುಗಳ ತಯಾರಿಕೆ ಮತ್ತು ಮಾರಾಟವನ್ನು ತಪ್ಪಿಸುವುದು.

c)

ಮಾರುಕಟ್ಟೆಯಲ್ಲಿ ನಡೆಯಬಹುದಾದ ಅನುಚಿತ ವ್ಯವಹಾರ ಪದ್ಧತಿಗಳನ್ನು ತಡೆಗಟ್ಟುವುದು.

d)

ಮೇಲಿನ ಎಲ್ಲಾ

19.

ಆರೋಗ್ಯಕರ ಸ್ಪರ್ಧೆಯೊಂದಿಗೆ ಯೋಗ್ಯ ಬೆಲೆಗೆ ಉತ್ತಮ ಗುಣಮಟ್ಟದ ವಸ್ತು ಅಥವಾ ಸೇವೆ ದೊರೆಯುವಂತೆ ಮಾಡುವುದು ಈ ಕಾಯ್ದೆಯ ಮುಖ್ಯ ಉದ್ದೇಶವಾಗಿದೆ

a)

ಅಗತ್ಯ ವಸ್ತುಗಳ ಕಾಯ್ದೆ

b)

ತೂಕ ಮತ್ತು ಅಳತೆ ಕಾಯ್ದೆ

c)

ಗ್ರಾಹಕ ಸಂರಕ್ಷಣಾ ಕಾಯ್ದೆ

d)

ಆಹಾರ ಕಲಬೆರಕೆ ಪ್ರತಿಬಂಧಕ ಕಾಯ್ದೆ

20.

ಕೇಂದ್ರ ಸರ್ಕಾರದ ಗ್ರಾಹಕರ ಕಲ್ಯಾಣ ಇಲಾಖೆಯ ಮಂತ್ರಿಗಳು ರಾಷ್ಟ್ರೀಯ ಗ್ರಾಹಕ ಸಂರಕ್ಷಣಾ ವೇದಿಕೆಯ ಅಧ್ಯಕ್ಷರಾಗಿದ್ದರೆ ರಾಜ್ಯ ಗ್ರಾಹಕ ಸಂರಕ್ಷಣಾ ವೇದಿಕೆಯ ಅಧ್ಯಕ್ಷರು

a)

ರಾಜ್ಯ ಸರ್ಕಾರದ ಗ್ರಾಹಕ ಸಂಬಂಧಿ ಇಲಾಖೆಯ ಮಂತ್ರಿ

b)

ಮುಖ್ಯಮಂತ್ರಿಗಳು

c)

ರಾಜ್ಯಪಾಲರು

d)

ಮೇಲಿನ ಯಾರೂ ಅಲ್ಲ

21.
ಇವರು ಜಿಲ್ಲಾ ಗ್ರಾಹಕ ಸಂರಕ್ಷಣಾ ಮಂಡಳಿ ಅಧ್ಯಕ್ಷರಾಗಿರುತ್ತಾರೆ
a)
ಜಿಲ್ಲಾ ಪಂಚಾಯತ್ ಅಧ್ಯಕ್ಷರು
b)
ಜಿಲ್ಲಾಧಿಕಾರಿಗಳು
c)
ಜಿಲ್ಲಾ ಪಂಚಾಯತ್ ಸಿ ಇ ಒ
d)
ಅಪರಾ ಜಿಲ್ಲಾಧಿಕಾರಿಗಳು
22.
ಗ್ರಾಹಕರ ಜಿಲ್ಲಾವೇದಿಕೆಯ ನ್ಯಾಯ ಪೀಠಕ್ಕೆ ರಾಜ್ಯ ಸರ್ಕಾರದಿಂದ ನಾಮಾಂಕಿತಗೊಂಡ ಇವರು ಅಧ್ಯಕ್ಷರಾಗಿರುತ್ತಾರೆ
a)
ಜಿಲ್ಲಾನ್ಯಾಯಾಧೀಶರು
b)
ಜಿಲ್ಲಾಧಿಕಾರಿಗಳು
c)
ಜಿಲ್ಲಾನ್ಯಾಯಾಧೀಶರ ಅರ್ಹತೆಯುಳ್ಳ ವ್ಯಕ್ತಿ
d)
ಜಿಲ್ಲಾ ಪಂಚಾಯತ್ ಸಿ ಇ ಒ
23.

ಗ್ರಾಹಕರ ರಾಜ್ಯ ಆಯೋಗಕ್ಕೆ ಇವರು ಮುಖ್ಯಸ್ಥರು

a)

ಉಚ್ಛನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು ಅಥವಾ ಹಾಲಿ ನ್ಯಾಯಾಧೀಶರು

b)

ರಾಜ್ಯಪಾಲರು

c)

ರಾಜ್ಯ ಆಹಾರ &ನಾಗರಿಕ ಮಂತ್ರಿಗಳು

d)

ಮೇಲಿನ ಯಾರೂ ಅಲ್ಲ

24.

ಇವುಗಳಲ್ಲಿ ಗ್ರಾಹಕ ನ್ಯಾಯಾಲಯಕ್ಕೆ ಸಲ್ಲಿಸುವ ದೂರಿನಲ್ಲಿ ಇರಬೇಕಾದ ಮಾಹಿತಿಗಳು

a)

ದೂರುಗಳು ಕೈಬರಹದ ಅಥವ ಬೆರಳಚ್ಚಿನ ಮಾದರಿಯಲ್ಲಿರಬೇಕು.

b)

ಈ ಮಾಹಿತಿಯಲ್ಲಿ ದೂರುಕೊಡುವವನ ಹೆಸರು, ವಿಳಾಸ ಮತ್ತು ದೂರವಾಣಿಯ ಸಂಖ್ಯೆ ಸರಿಯಾಗಿ ನಮೂದಿಸಿರಬೇಕು.

c)

ಯಾವ ವ್ಯಾಪಾರಿ ಅಥವಾ ಪೂರೈಕೆದಾರನ ವಿರುದ್ಧ ದೂರುಕೊಡಬೇಕೆಂಬುದನ್ನು ಪೂರ್ಣವಾಗಿ ನಮೂದಿಸಿರಬೇಕು.

d)

ಮೇಲಿನ ಎಲ್ಲಾ

25.

ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸುವುದಕ್ಕೆ ಸಂಬಂಧಿಸಿದಂತೆ ಇದು ತಪ್ಪುಮಾಹಿತಿಯಾಗಿದೆ

a)

ನಷ್ಟದ ಸೂಕ್ತ ಪರಿಹಾರದ ಮೊಬಲಗು ಹಾಗೂ ಇದಕ್ಕೆ ಸಂಬಂಧಪಟ್ಟ ರಸೀತಿ ಅಥವ ಬಿಲ್ಲನ್ನು ಲಗತ್ತಿಸಬೇಕು.

b)

ದೂರಿಗೆ ನಿಗದಿತ ಶುಲ್ಕ ಅಥವಾ ನೋಂದಾವಣಿ ಶುಲ್ಕ ಪಾವತಿಸ ಬೇಕು

c)

ಗ್ರಾಹಕನೇ ನೇರವಾಗಿ ತನ್ನ ದೂರನ್ನು ಅಧ್ಯಕ್ಷರ ಮುಂದೆ ವಾದಿಸಬಹುದು ವಕೀಲರು ಬೇಕಾಗಿಲ್ಲ.

d)

ಯಾವ ವಸ್ತುವಿನಿಂದ ನಷ್ಟವಾಗಿದೆ ಅಥವಾ ಮೋಸವಾಗಿದೆ ಎಂಬುದನ್ನು ಮತ್ತು ನಷ್ಟ ಹೊಂದಿರುವ ಮೊಬಲಗು ಎಷ್ಟು ಎಂಬುದನ್ನು ಸರಿಯಾಗಿ ನಮೂದಿಸಿರಬೇಕು.