wayground logo

Free Printable Worksheets

NEW

Font size

S
M
L
XL
Worksheets

10th:SS:ರಾಜ್ಯಶಾಸ್ತ್ರ 01(ಭಾಗ:01):by Nataraj and Bhagwat

Total questions: 15

Worksheet time: 8mins

Name
Class
Date
1.

ಸರ್ಕಾರಗಳು ಉದ್ಯೋಗ ಸೃಷ್ಟಿಸುವ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಕಾರಣ

a)

ಕೈಗಾರಿಕಾಭಿವೃದ್ಧಿಗಾಗಿ

b)

ಭ್ರಷ್ಟಾಚಾರದ ನಿವಾರಣೆಗಾಗಿ

c)

ನಿರುದ್ಯೋಗ ಸಮಸ್ಯೆ ನಿವಾರಣೆಗೆ

d)

ತೆರಿಗೆ ಸಂಗ್ರಹಿಸುವುದಕ್ಕಾಗಿ

2.

ಭಾರತದಲ್ಲಿ ಜಾತಿ ಆಧಾರಿತ ತಾರತಮ್ಯವು

a)

ಪುರಾತನ ಸಮಾಜ ರಚನೆಯಿಂದ ಒಂದು ಬಳುವಳಿಯಾಗಿದೆ

b)

ನಿರುದ್ಯೋಗದಿಂದ ಉಂಟಾದ ಸಮಸ್ಯೆಯಾಗಿದೆ

c)

ಬ್ರಿಟೀಷರ ಆಡಳಿತದಿಂದ ಸೃಷ್ಟಿಯಾಗಿದೆ

d)

ಸ್ವಾತಂತ್ರ್ಯದ ನಂತರ ಬೆಳೆದು ಬಂದಿದೆ

3.

ಭಾರತೀಯ ಸಮಾಜಕ್ಕೆ ಪ್ರಬಲವಾದ ಸವಾಲುಗಳೆಂದರೆ

a)

ತಂತ್ರಜ್ಞಾನದ ಕೊರತೆ,

b)

ಸುದ್ದಿಮಾಧ್ಯಮಗಳ ಕೊರತೆ

c)

ಅತಿಯಾದ ಭಾಷಾಭಿಮಾನ

d)

ಲಿಂಗ, ಜಾತಿ ಮತ್ತು ಪ್ರಾದೇಶಿಕ ಅಸಮಾನತೆಗಳು

4.

ಕರ್ನಾಟಕದಲ್ಲಿ ಪ್ರಾದೇಶಿಕ ಅಸಮತೋಲನವನ್ನು ಹೋಗಲಾಡಿಸುವ ಉದ್ದೇಶದಿಂದ 2001ರಲ್ಲಿ ಈ ಸಮಿತಿಯು ಕರ್ನಾಟಕದಲ್ಲಿನ ಪ್ರಾದೇಶಿಕ ಅಸಮತೋಲನವನ್ನು ಕುರಿತು ವರದಿ ನೀಡಿದೆ.

a)

ಮಲೆನಾಡು ಪ್ರಾಧಿಕಾರ

b)

ಎಂ.ಡಿ. ನಂಜುಂಡ ಸ್ವಾಮಿ

c)

ಸರೊಜಿನಿ ಮಹಿಷಿ

d)

ಡಿ.ಎಂ. ನಂಜುಂಡಪ್ಪ

5.

ಸಂವಿಧಾನಕ್ಕೆ ವಿಧಿ 371 (ಜೆ) ಸೇರ್ಪಡೆ ಮಾಡುವುದರ ಮೂಲಕ ಕರ್ನಾಟಕದಲ್ಲಿನ ಈ ಪ್ರದೇಶಗಳಿಗೆ ವಿಶೇಷ ಸ್ಥಾನಮಾನವನ್ನು ನೀಡಲಾಗಿದೆ.

a)

ಗ್ರಾಮೀಣ ಪ್ರದೇಶ

b)

ಕೈಗಾರಿಕಾ ಪ್ರದೇಶ

c)

ಹಿಂದುಳಿದ ಪ್ರದೇಶ

d)

ನಗರ ಪ್ರದೇಶ

6.

ಮತೀಯವಾದವು ಮತೀಯ ಗುಂಪುಗಳ ಹಿತಾಸಕ್ತಿಯನ್ನು ಈ ಹಿತಾಸಕ್ತಿಗಿಂತಲೂ ಹೆಚ್ಚಿನದು ಎಂದು ಪರಿಗಣಿಸುತ್ತದೆ.

a)

ವೈಯಕ್ತಿಕ

b)

ರಾಷ್ಟ್ರೀಯ

c)

ಅಂತರಾಷ್ಟ್ರೀಯ

d)

ರಾಜ್ಯದ

7.

ದೇಶದಲ್ಲಿ ಮತೀಯತೆಗೆ ಪೂರಕವಾಗಿ ತಮ್ಮ ತಮ್ಮ ಹಿತಾಸಕ್ತಿಗಳನ್ನು ವೃದ್ಧಿಸುವ ಪ್ರಯತ್ನಗಳನ್ನು ಈ ಶಕ್ತಿಗಳು ಮಾಡುತ್ತವೆ.

a)

ಜನಾಂಗಿಯ

b)

ರಾಜಕೀಯ

c)

ಆಂತರಿಕ

d)

ಮತೀಯ

8.

ಮಹಿಳೆಯರ ಶಿಕ್ಷಣ ಮತ್ತು ಅಭಿವೃದ್ಧಿಯನ್ನು ಉತ್ತಮ ಪಡಿಸಲು ಸರ್ಕಾರವು ಈ ಇಲಾಖೆಯನ್ನು ಪ್ರಾರಂಭಿಸಿದೆ.

a)

ಶಿಶು ಕಲ್ಯಾಣ

b)

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ

c)

ಗ್ರಾಮೀಣಾಭಿವೃದ್ಧಿ

d)

ಮೇಲಿನ ಯಾವುದೂ ಅಲ್ಲ

9.

ತಾವು ವಾಸಿಸುವ ಪ್ರದೇಶದ ಬಗ್ಗೆ ಅತ್ಯಂತ ಗಾಢವಾದ ಅಭಿಮಾನ ಬೆಳೆಸಿ ಕೊಂಡಿರುವುದನ್ನು ಹೀಗೆನ್ನುತ್ತಾರೆ.

a)

ಪ್ರಾದೇಶಿಕತೆ

b)

ಕೋಮುವಾದ

c)

ರಾಷ್ಟ್ರೀಯತೆ

d)

ಮೇಲಿನ ಯಾವುದೂ ಅಲ್ಲ

10.

ಕರ್ನಾಟಕದಲ್ಲಿ ಭ್ರಷ್ಟಾಚಾರ ನಿಯಂತ್ರಿಸಲು ಈ ಸಂಸ್ಥೆ ಅಸ್ತಿತ್ವದಲ್ಲಿದೆ.

a)

ಲೋಕಾಯುಕ್ತ

b)

ಲೋಕಪಾಲ

c)

ಗುಪ್ತ ದಳ

d)

ಮೇಲಿನ ಎಲ್ಲಾ

11.

2001ರಲ್ಲಿ ಅಮೆರಿಕಾದ ವಿಶ್ವ ವ್ಯಾಪಾರ ಕೇಂದ್ರದ ಧ್ವಂಸ ಇದರ ಪರಿಣಾಮವಾಗಿದೆ.

a)

ವಸಹಾತು ನೀತಿ

b)

ಭಯೋತ್ಪಾದಕತೆ

c)

ಭ್ರಷ್ಟಾಚಾರ

d)

ಕಾರ್ಪೋರೇಟ್ ತಂತ್ರಗಾರಿಕೆ

12.

ನಿರುದ್ಯೋಗಕ್ಕೆ ಕಾರಣಗಳ ಸರಿಯಾದ ಹೊಂದಾಣಿಕೆ ಎಂದರೆ,

a)

ಮಿತಿಮೀರಿದ ಜನಸಂಖ್ಯೆ ಮತ್ತು ಕಡಿಮೆ ತಂತ್ರಜ್ಞಾನದ ಬಳಕೆ

b)

ಮಿತಿಮೀರಿದ ಜನಸಂಖ್ಯೆ ಮತ್ತು ಹೆಚ್ಚಾದ ತಂತ್ರಜ್ಞಾನದ ಬಳಕೆ

c)

ಕಡಿಮೆ ಜನಸಂಖ್ಯೆ ಮತ್ತು ತಂತ್ರಜ್ಞಾನದ ಕಡಿಮೆ ಬಳಕೆ

d)

ಕಡಿಮೆ ಜನಸಂಖ್ಯೆ ಮತ್ತು ಹೆಚ್ಚಾದ ತಂತ್ರಜ್ಞಾನದ ಬಳಕೆ

13.

ಇವುಗಳಲ್ಲಿ ಭಯೋತ್ಪಾದಕತೆಗೆ ಪ್ರೇರಣಾತ್ಮಕ ಅಂಶವೆಂದರೆ,

a)

ಧಾರ್ಮಿಕ ಮೂಲಭೂತ ಚಿಂತನೆಯಿಂದ

b)

ಪ್ರತ್ಯೇಕವಾದದಿಂದ

c)

ನಾಡ ಬಿಡುಗಡೆಯ ಛಲದಿಂದ

d)

ಮೇಲಿನ ಎಲ್ಲವೂ

14.

ಭಾರತದಲ್ಲಿನ ನಿರುದ್ಯೋಗ ಸಮಸ್ಯೆ ನಿವಾರಣೆ ಯಾಗಬೇಕಾದರೆ,

a)

ಆಮದುಗಳು ಹೆಚ್ಚಾಗಬೇಕು

b)

ಕೃಷಿಯಲ್ಲಿ ತಂತ್ರಜ್ಞಾನ ಹೆಚ್ಚಾಗಬೇಕು

c)

ಗುಣಮಟ್ಟದ ತಾಂತ್ರಿಕ ಶಿಕ್ಷಣವನ್ನು ನೀಡಬೇಕು

d)

ವಿದೇಶಿ ವ್ಯಾಪಾರ ಕಡಿಮೆಯಾಗಬೇಕು

15.

ನಿರುದ್ಯೋಗಕ್ಕೆ ಸಂಬಂಧಿಸಿದಂತೆ ಈ ಹೇಳಿಕೆ ಸರಿಯಾಗಿದೆ.

a)

ನಿವಾರಣೆಗೆ ಸರ್ಕಾರಗಳು ಪ್ರಯತ್ನಿಸಿಲ್ಲ

b)

ಮೊದಲು ಕಡಿಮೆ ಇದ್ದು ಇತ್ತೀಚಿಗೆ ಹೆಚ್ಚಾಗಿದೆ.

c)

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ

d)

ರಾಷ್ಟ್ರೀಯ ಆದಾಯದ ಕುಸಿತದ ಪರಿಣಾಮವಾಗಿದೆ