wayground logo

Free Printable Worksheets

NEW

Font size

S
M
L
XL
Worksheets

ಸೇತುಬಂಧ ಪೂರ್ವಪರೀಕ್ಷೆ

Total questions: 18

Worksheet time: 9mins

Name
Class
Date
1.

ಕೆಳಗಿನ ಆಯ್ಕೆಗಳಲ್ಲಿ ಯಾವುದು ವಿಜಾತಿ ಸಂಯುಕ್ತಾಕ್ಷರದಿಂದ ಕೂಡಿದೆ

a)

ಆರೋಗ್ಯ

b)

ದಿಬ್ಬಣ

c)

ಸಜ್ಜನ

d)

ಅಪ್ಪ

2.

ಮಾನವತೆಯೇ ವಿಶ್ವ ಅನುಸರಿಸಬೇಕಾದ ಮಾರ್ಗ ಈ ವಾಕ್ಯದಲ್ಲಿ ವಿಶ್ವ ಪದದ ಅರ್ಥ

a)

ರಾಜ್ಯ

b)

ದೇಶ

c)

ಸೀಮಿತ ಪ್ರದೇಶ

d)

ಜಗತ್ತು

3.

ಸಮಸ್ತಸೇನೆಯು ತಲಕಾಡುಗೊಂಡನಿಗೆ ಜಯವಾಗಲಿ ಎಂದು ಜೈಕಾರ ಹಾಕಿತು ಈವಾಕ್ಯಕ್ಕೆ ಬಳಸಬೇಕಾದ ಸೂಕ್ತ ಲೇಖನ ಚಿಹ್ನೆ

a)

ಪ್ರಶ್ನಾರ್ಥಕ ಮತ್ತು ಭಾವಸೂಚಕ

b)

ಪ್ರಶ್ನಾರ್ಥಕ ಮತ್ತು ಉದ್ಧರಣ

c)

ವಾಕ್ಯವೇಷ್ಠನ

d)

ಪ್ರಶ್ನಾರ್ಥಕ

4.

ಇಂದಿನ ಮಕ್ಕಳಲ್ಲಿ ಮೌಲ್ಯಗಳು ಮರೆಯಾಗುತ್ತಿವೆ ಈ ವಾಕ್ಯದಲ್ಲಿ ಮಕ್ಕಳಲ್ಲಿ ಪದದ ಮೇಲಿರುವ ವಿಭಕ್ತಿ

a)

ಪ್ರಥಮ

b)

ದ್ವಿತೀಯ

c)

ಚತುರ್ಥಿ

d)

ಸಪ್ತಮಿ

5.

ಅಪ್ಪಾ ದುರ್ಜಯ ಇಲ್ಲಿಗೇಕೆ ಬಂದೆ ಈ ವಾಕ್ಯದಲ್ಲಿ ದುರ್ಜಯ ಪದವು

a)

ಅಂಕಿತನಾಮ

b)

ಅನ್ವರ್ಥನಾಮ

c)

ಸರ್ವನಾಮ

d)

ರೂಢನಾಮ

6.

ನಾನು ನಾಳೆ ಬೆಳಿಗ್ಗೆ ರೈಲಿನಲ್ಲಿ ಬೆಂಗಳೂರಿಗೆ ಹೋಗುತ್ತೇನೆ ಈ ವಾಕ್ಯದಲ್ಲಿರುವ ಅನ್ಯದೇಶ್ಯಪದ

a)

ನಾನು

b)

ನಾಳೆ

c)

ರೈಲು

d)

ಬೆಂಗಳೂರು

7.

ಎಲ್ಲಾ ಧರ್ಮಗಳ ಸಾರವೂ ಒಂದೇ ಅದು ಮುಕ್ತಿ ಈ ವಾಕ್ಯದಲ್ಲಿರುವ ಧರ್ಮ ಪದದ ತದ್ಭವ ರೂಪ

a)

ಧರಮ

b)

ದರುಮ

c)

ದಮ್ಮ

d)

ಯಾವುದೂ ಸರಿಯಲ್ಲ

8.

ಕಬ್ಬಿನಂದದಿ ಈ ಪದಕ್ಕೆ ಪ್ರಸ್ಥಾರ ಹಾಕುವ ಸರಿಯಾದ ಕ್ರಮವಿದು

a)

ಗುರು,ಲಘು,ಗುರು,ಲಘು,ಲಘು

b)

ಲಘು,ಗುರು,ಗುರು,ಲಘು, ಲಘು

c)

ಲಘು,ಲಘು

d)

ಲಘು,ಲಘು

9.

ತರುಣವನಹರಿಣಯುಗಮಂ ತರಕ್ಷು ಪಿಡಿವಂತೆ ಚಂಡಕರ್ಮಂ ಪಿಡಿದಂ ಈ ವಾಕ್ಯದಲ್ಲಿ ಅಡಕವಾಗಿರುವ ಅಲಂಕಾರ

a)

ರೂಪಕ

b)

ದೃಷ್ಠಾಂತ

c)

ಉತ್ಪ್ರೇಕ್ಷೆ

d)

ಉಪಮಾಲಂಕಾರ

10.

ಮೊದಲು ಚೌಕಿಯಲ್ಲಿ ಗಣಪತಿ ಪೂಜೆ ಮಾಡುತ್ತಾರೆ ಈ ವಾಕ್ಯದಲ್ಲಿರುವ ಕ್ರಿಯಾಪದವಿದು

a)

ಪೂಜೆ

b)

ಗಣಪತಿ

c)

ಚೌಕಿ

d)

ಮಾಡುತ್ತಾರೆ

11.

ಓದು ಬರೆಹ ಇದು ಕೆಳಗಿನ ಯಾವವ್ಯಾಕರಣಾಂಶಕ್ಕೆ ಉದಾಹರಣೆ

a)

ಜೋಡುನುಡಿ

b)

ದ್ವಿರುಕ್ತಿ

c)

ನುಡಿಗಟ್ಟು

d)

ಪದಪುಂಜ

12.

ತಾನ್ ಸೇನ್ ಸಂಗೀತಕ್ಕೆ ಎಲ್ಲರೂ ತಲೆದೂಗಿದರು ಇಲ್ಲಿ ತಲೆದೂಗು ನುಡಿಗಟ್ಟಿನ ಅರ್ಥ

a)

ತಲೆಯನ್ನು ಅಲ್ಲಾಡಿಸು

b)

ಉಯ್ಯಾಲೆಯಾಡಿಸು

c)

ತಲೆತಿರುಗಿಸು

d)

ಮೆಚ್ಚುಗೆ ವ್ಯಕ್ತಪಡಿಸು

13.

ಶಕ್ತಿಗಿಂತ ಯುಕ್ತಿಮೇಲು ಈ ಗಾದೆಯ ಅರ್ಥವಿದು

a)

ಬುದ್ಧಿಶಕ್ತಿಗಿಂತ ದೇಹಶಕ್ತಿ ಶ್ರೇಷ್ಠ

b)

ದೇಹಶಕ್ತಿಗಿಂತ ಬುದ್ಧಿಶಕ್ತಿಶ್ರೇಷ್ಠ

c)

ಶಕ್ತಿ ಮತ್ತು ಯುಕ್ತಿ ಎರಡೂ ಶ್ರೇಷ್ಠ

d)

ಬುದ್ಧಿಶಕ್ತಿಯಿಂದ ಗೆಲ್ಲುವುದು ಶ್ರೇಷ್ಠ

14.

ಕೌಟುಂಬಿಕ ಪತ್ರ ಬರೆಯುವ ಸರಿಯಾದ ವಿನ್ಯಾಸವಿದು

a)

ಇಂದ,ಇವರಿಗೆ,ಮಾನ್ಯರೇ,ವಿಷಯ,ವಂದನೆಗಳೊಂದಿಗೆ

b)

ದಿನಾಂಕ,ಸ್ಥಳ,ಇಂದ,ಇವರಿಗೆ,ಮಾನ್ಯರೇ,

c)

ಕ್ಷೇಮ,ಶ್ರೀ,ದಿನಾಂಕ,ಸ್ಥಳ,ಸಂಬೋಧನೆ,ಒಡಲು ,ನಿಮ್ಮಪ್ರೀತಿಯ

d)

ಇವರಿಗೆ, ಮಾನ್ಯರೇ, ಕ್ಷೇಮ,ಒಡಲು,ಸಂಬೋಧನೆ

15.

ಕಾಡು ಪದದ ನಾನಾರ್ಥಕ ರೂಪವಿದು

a)

ಅರಣ್ಯ-ಪೀಡಿಸು

b)

ಅರಣ್ಯ-ರೋಧಿಸು

c)

ಅರಣ್ಯ-ಪ್ರೀತಿಸು

d)

ಅರಣ್ಯ- ಅಳಿಸು

16.

ಸಾರಸಜ್ಜನರ ಸಂಗವದು ಹೆಜ್ಜೇನು ಸವಿದಂತೆ ಈ ವಾಕ್ಯದಲ್ಲಿ ಸಜ್ಜನ ಪದದ ವಿರುದ್ಧಾರ್ಥಕ

a)

ದುಷ್ಠ

b)

ಶಿಷ್ಠ

c)

ದುರ್ಜನ

d)

ವಿದ್ವಜ್ಜನ

17.

ಆರು ಸಾಲುಳ್ಳ ಪದ್ಯವನ್ನು ಹೀಗೆನ್ನುತ್ತಾರೆ

a)

ತ್ರಿಪಧಿ

b)

ಚೌಪಧಿ

c)

ಷಟ್ಪಧಿ

d)

ಸಾನೆಟ್

18.

ಬುದ್ಧನೆಂದರೆ ಕರುಣೆ ಬುದ್ಧನೆಂದರೆ ಬೆಳಕು ಈ ಪದ್ಯದ ಸರಿಯಾದ ಕ್ರಮ

a)

ಲುಂಬಿನಿಯಬನಕೆ ವೈಶಾಖ ಬಂದಂತೆ, ಬುದ್ಧನೆಂದರೆ ಸತ್ಯ ಬುದ್ಧನೆಂದರೆ ನಿತ್ಯ,ಬುದ್ಧನೆಂದರೆ ಶಾಂತಿ ಬುದ್ದನೆಂದರೆ ಕ್ರಾಂತಿ

b)

ಲುಂಬಿನಿಯಬನಕೆ ವೈಶಾಖ ಬಂದಂತೆ, ಬುದ್ಧನೆಂದರೆ ಶಾಂತಿ ಬುದ್ದನೆಂದರೆ ಕ್ರಾಂತಿ ಬುದ್ಧನೆಂದರೆ ಸತ್ಯ ಬುದ್ಧನೆಂದರೆನಿತ್ಯ,

c)

,ಬುದ್ಧನೆಂದರೆ ಶಾಂತಿ ಬುದ್ದನೆಂದರೆ ಕ್ರಾಂತಿ, ಬುದ್ಧನೆಂದರೆ ಸತ್ಯ ಬುದ್ಧನೆಂದರೆನಿತ್ಯ,ಲುಂಬಿನಿಯಬನಕೆ ವೈಶಾಖ ಬಂದಂತೆ

d)

ಮೇಲಿನ ಯಾವುದೂ ಸರಯಲ್ಲ