wayground logo

Free Printable Worksheets

NEW

Font size

S
M
L
XL
Worksheets

ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳವಳಿಗಳು

Total questions: 20

Worksheet time: 15mins

Name
Class
Date
1.

19ನೇ ಶತಮಾನದಲ್ಲಿ ಭಾರತದಲ್ಲಿ ಹೊಸ ವಿದ್ಯಾವಂತ ವರ್ಗ ಸೃಷ್ಟಿಯಾಗಲು ಕಾರಣ

a)

ಬ್ರಿಟಿಷರ ಇಂಗ್ಲಿಷ್ ಶಿಕ್ಷಣ ನೀತಿ

b)

ಪಾಶ್ಚಿಮಾತ್ಯ ಮೌಲ್ಯಗಳ ಪರಿಚಯ

c)

ಸಮಾಜ ಸುಧಾರಕರ ಪ್ರಯತ್ನ

d)

ಭಾರತೀಯರಲ್ಲಿ ಮೂಡಿದ ಅರಿವು

2.

ಬ್ರಿಟಿಷರು ತಮ್ಮ ಆರ್ಥಿಕ ಮತ್ತು ರಾಜಕೀಯ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಪ್ರಚುರಪಡಿಸಿದ ಸಿದ್ಧಾಂತ

a)

ಎಲ್ಲರನ್ನೂ ಒಳಗೊಳ್ಳುವ ಸಿದ್ಧಾಂತ

b)

ಬಿಳಿಯರ ಮೇಲಿನ ಹೊರೆ ಸಿದ್ದಾಂತ

c)

ಸಂಧಾನ ಮತ್ತು ಯುದ್ಧ ಸಿದ್ಧಾಂತ

d)

ಒಡೆದು ಆಳುವ ನೀತಿ

3.

"ಆತ್ಮೀಯ ಸಭಾ"ದ ಪ್ರಮುಖ ಆಶಯ

a)

ಧಾರ್ಮಿಕ ಮತ್ತು ಸಾಮಾಜಿಕ ಪಿಡುಗುಗಳನ್ನು ಕೊನೆಗಾಣಿಸುವುದು

b)

ರಾಷ್ಟ್ರೀಯ ಮನೋಭಾವ ಬೆಳೆಸುವುದು

c)

ವೈಜ್ಞಾನಿಕ ದೃಷ್ಟಿಕೋನ ಮೂಡಿಸುವುದು

d)

ಹಿಂದೂ ಧರ್ಮದ ಸುಧಾರಣೆ

4.

ಸತಿ ಪದ್ಧತಿಯನ್ನು ಕಾನೂನಾತ್ಮಕವಾಗಿ ನಿಷೇಧಿಸಿದ ವರ್ಷ

a)

1820

b)

1825

c)

1830

d)

1829

5.

"ಭಾರತೀಯ ರಾಷ್ಟ್ರೀಯತೆಯ ಪ್ರವಾದಿ" ಎಂದು ಖ್ಯಾತರಾದವರು

a)

ರಾಜಾರಾಮ್ ಮೋಹನ್ ರಾಯ್

b)

ರವೀಂದ್ರನಾಥ ಟಾಗೋರ್

c)

ಎಂ. ಜಿ. ರಾನಡೆ

d)

ಆತ್ಮರಾಮ ಪಾಂಡುರಂಗ

6.

ಮೌಢ್ಯಾಚಾರಗಳಲ್ಲೇ ಮುಳುಗಿದ್ದ ಭಾರತೀಯ ಸಮಾಜಕ್ಕೆ ಡಿರೇಜಿಯೋ ಅವರು ನೀಡಿದ ಪರಿಹಾರ

a)

ಎಲ್ಲರೂ ಶಿಕ್ಷಿತರಾಗುವುದು

b)

ಯುವ ಬಂಗಾಳಿ ಚಳುವಳಿಯಲ್ಲಿ ಭಾಗವಹಿಸುವುದು

c)

ಎಲ್ಲರೂ ವೈಜ್ಞಾನಿಕ ದೃಷ್ಟಿಕೋನ ಬೆಳೆಸಿಕೊಳ್ಳುವುದು

d)

ಪಾಶ್ಚಿಮಾತ್ಯ ಮೌಲ್ಯಗಳನ್ನು ಅನುಕರಿಸುವುದು

7.

ದಯಾನಂದ ಸರಸ್ವತಿಯವರು "ವೇದಗಳಿಗೆ ಮರಳಿ" ಎಂದು ಕರೆ ನೀಡಲು ಕಾರಣ ವೇದಗಳಿಂದ-

a)

ಧಾರ್ಮಿಕ ಸುಧಾರಣೆ ಸಾಧ್ಯವಿದೆ

b)

ಆಧುನಿಕ ಭಾರತದ ಸಮಸ್ಯೆಗಳಿಗೆ ಪರಿಹಾರವಿದೆ

c)

ಸಾಮಾಜಿಕ ಸಮಾನತೆ ಸಾಧಿಸಬಹುದು

d)

ಹೊಸ ಸಮಾಜದ ಸೃಷ್ಟಿಯಾಗುತ್ತದೆ

8.

ಆರ್ಯ ಸಮಾಜದ ತತ್ವಗಳಿಂದ ಪ್ರೇರಿತರಾದ ಭಾರತದ ಸ್ವಾತಂತ್ರ್ಯ ಹೋರಾಟಗಾರ

a)

ಬಿಪಿನ್ ಚಂದ್ರಪಾಲ್

b)

ಲಾಲಾ ಲಜಪತ್ ರಾಯ್

c)

ಬಾಲಗಂಗಾಧರ ತಿಲಕ್

d)

ದಾದಾಬಾಯಿ ನವರೋಜಿ

9.

ಪ್ರಾರ್ಥನಾ ಸಮಾಜದ ಪ್ರಮುಖ ನಾಯಕರು

a)

ಸಾವಿತ್ರಿಬಾಯಿ ಫುಲೆ

b)

ಮದನಮೋಹನ ಮಾಳವೀಯ

c)

ಎಂ. ಜಿ. ರಾನಡೆ

d)

ಎಲ್ಲರೂ

10.

ಜ್ಯೋತಿ ಬಾಪುಲೆ ಅವರು ರಚಿಸಿದ ಗ್ರಂಥ

a)

ಸಂವಾದ ಕೌಮುದಿ

b)

ಸತ್ಯಾರ್ಥ ಪ್ರಕಾಶ

c)

ಗುಲಾಮಗಿರಿ

d)

ನ್ಯೂ ಇಂಡಿಯಾ

11.

ಬ್ರಿಟಿಷ್ ವಿರೋಧಿ ಮನೋಧರ್ಮದಿಂದಾಗಿ ಮುಸ್ಲಿಮರು ಇಂಗ್ಲಿಷ್ ಶಿಕ್ಷಣದಿಂದ ದೂರಾಗಿದ್ದರ ಪರಿಣಾಮ

a)

ವೈಜ್ಞಾನಿಕ ದೃಷ್ಟಿಕೋನ ಬೆಳೆಯಲಿಲ್ಲ

b)

ಮುಸ್ಲಿಮರಲ್ಲಿನ ಮೌಲ್ಯಗಳು ಬದಲಾವಣೆಯಾದವು

c)

ಶಿಕ್ಷಣದ ಅರ್ಹತೆಯಿಂದ ದೊರೆಯಬಹುದಾದ ಅವಕಾಶಗಳಿಂದ ವಂಚಿತರಾದರು

d)

ಹೊಸ ಸುಶಿಕ್ಷಿತ ವರ್ಗ ಸೃಷ್ಟಿಯಾಯಿತು

12.

"ಯಾರ ಆತ್ಮ ಬಡವರಿಗಾಗಿ ಮಿಡಿಯುವುದೋ ಅವನೇ ಮಹಾತ್ಮ" ಎಂದವರು

a)

ಮಹಾತ್ಮ ಗಾಂಧೀಜಿ

b)

ಅನಿಬೆಸೆಂಟ್

c)

ರಾಮಕೃಷ್ಣ ಪರಮಹಂಸ

d)

ಸ್ವಾಮಿ ವಿವೇಕಾನಂದ

13.

ಪಾಶ್ಚಿಮಾತ್ಯರಿಗೆ ಭಾರತದ ಸಾಂಸ್ಕೃತಿಕ ಹಿರಿಮೆಯು ಪರಿಚಯವಾಗಲು ಸಾಧ್ಯವಾದದ್ದು

a)

ವಿವೇಕಾನಂದರ ಚಿಕಾಗೋದಲ್ಲಿನ ಭಾಷಣದಿಂದ

b)

ರಾಮಕೃಷ್ಣ ಮಿಷನ್ ಸ್ಥಾಪನೆಯಿಂದ

c)

ಭಗವದ್ಗೀತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದರಿಂದ

d)

ಧಾರ್ಮಿಕ ಸುಧಾರಣೆಯಿಂದ

14.

ಸ್ವಾಮಿ ವಿವೇಕಾನಂದರ ಸಲಹೆಯಂತೆ ಅಸ್ಪೃಶ್ಯ ವರ್ಗದ ಮಕ್ಕಳಿಗೆ ಶಾಲೆಗಳನ್ನು ಪ್ರಾರಂಭಿಸಿದವರು

a)

ರಾಮಕೃಷ್ಣ ಪರಮಹಂಸ

b)

ಹತ್ತನೇ ಚಾಮರಾಜ ಒಡೆಯರು

c)

ನಾಲ್ವಡಿ ಕೃಷ್ಣರಾಜ ಒಡೆಯರು

d)

ನರಸಿಂಹರಾಜ ಒಡೆಯರು

15.

ಥಿಯೋಸಾಫಿಕಲ್ ಸೊಸೈಟಿಯು ಮನುಷ್ಯನಿಗೆ _________ ಪ್ರಜ್ಞೆ ಮುಖ್ಯವೆಂದು ಘೋಷಿಸಿತು

a)

ವೈಜ್ಞಾನಿಕ

b)

ಸಮಯ

c)

ವಿಶ್ವಭ್ರಾತೃತ್ವ

d)

ದಾರ್ಶನಿಕ

16.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಮೊಟ್ಟಮೊದಲ ಮಹಿಳಾ ಅಧ್ಯಕ್ಷೆ

a)

ಸರೋಜಿನಿ ನಾಯ್ಡು

b)

ಅನಿಬೆಸೆಂಟ್

c)

ಸುಚೇತ ಕೃಪಲಾನಿ

d)

ಕಸ್ತೂರ ಬಾ ಗಾಂಧಿ

17.

ಧರ್ಮ ಪರಿಪಾಲನಾ ಯೋಗಂ ಚಳುವಳಿಯ ಮುಖ್ಯ ಉದ್ದೇಶ

a)

ಹಿಂದುಳಿದ ಮತ್ತು ಶೋಷಣೆಗೊಳಗಾದ ಸಮುದಾಯಗಳ ಸಬಲೀಕರಣ

b)

ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆ

c)

ಹಿಂದೂ ಧರ್ಮದ ತಾತ್ವಿಕ ಚಿಂತನೆಗಳ ಪ್ರಚಾರ

d)

ಸಮಾಜಕ್ಕೆ ಮಾರಕವಾದ ಪದ್ಧತಿಗಳ ನಿಷೇಧ

18.

1924 ರಲ್ಲಿ ವೈಕಂ ಸತ್ಯಾಗ್ರಹವನ್ನು ನಡೆಸಿದವರು

a)

ಮದನಮೋಹನ ಮಾಳವೀಯ

b)

ಅಲ್ಕಾಟ್

c)

ರಾಮಕೃಷ್ಣ ಪರಮಹಂಸ

d)

ನಾರಾಯಣಗುರು

19.

ಪೆರಿಯಾರ್ ಪ್ರಾರಂಭಿಸಿದ ಪತ್ರಿಕೆಯ ಹೆಸರು

a)

ರಿವೋಲ್ಟ್

b)

ದ್ರಾವಿಡ ಕಳಗಂ

c)

ಜಸ್ಟೀಸ್

d)

ಸೆಲ್ಫ್ ರೆಸ್ಪೆಕ್ಟ್

20.

ಸೆಂಟ್ರಲ್ ಹಿಂದೂ ಕಾಲೇಜು ಸ್ಥಾಪನೆಯಾದ ಸ್ಥಳ

a)

ಮದರಾಸು

b)

ಅಡ್ಯಾರ್

c)

ಮೈಸೂರು

d)

ಬನಾರಸ್